ಕುಂದಾಪುರ, ಆ. 05 (DaijiworldNews/SM): ಬುಧವಾರ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅಭಿಮಾನಿಗಳು ಹಾಗೂ ಆಪ್ತರು ಕೋಟದಿಂದ ಮಾರಣಕಟ್ಟೆ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದರು.
ಗುರುವಾರದಂದು ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರು ಸಹಿತ ಅಭಿಮಾನಿಗಳು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದಿಂದ ಮುಂಜಾನೆ ಹೊರಟು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಟ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ ಮತ್ತು ಕೋಟ ಅಭಿಮಾನಿಗಳಾದ ಪ್ರಸಾದ್ ಬಿಲ್ಲವ,ಸುದಿನ ಕೋಡಿ, ರಾಮಕೃಷ್ಣ ಶೆಟ್ಟಿ ಗುಡ್ರಿ, ಸಂದೀಪ್ ಕೊಲ್ಲೂರು,ಶೇಖರ್ ಪೂಜಾರಿ ಗೋಳಿಹೊಳೆ,ಮಹೇಶ್ ಹಟ್ಟಿಕುದ್ರು, ಸಾಯಿಕುಮಾರ್, ನಾಗರಾಜ್ ಗೋಳಿಹೊಳೆ ,ಸೀತರಾಮ್,ಸೂರಜ್ ಶೆಟ್ಟಿ ,ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವರಾಮ್ ಕೃಷ್ಣ ಭಟ್ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿಯವರ ಅಭಿಮಾನಿ ಕೋಟ ಅಮೃತೇಶ್ವರಿ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗ ದೇವಸ್ಥಾನದ ಭಕ್ತರಾಗಿರುವ ನಾವೆಲ್ಲಾ ಕೋಟ ಶ್ರೀನಿವಾಸ ಪೂಜಾರಿಯವರು ಮತ್ತೊಮ್ಮೆ ಮಂತ್ರಿಯಾದರೆ ಅವರ ಊರಾದ ಕೋಟದಿಂದ ಮಾರಣಕಟ್ಟೆಗೆ ಕಾಲ್ನಡಿಗೆಯಲ್ಲಿ ತೆರಳುತ್ತೇವೆ ಎಂದು ಸಂಕಲ್ಪ ಮಾಡಿದ್ದೇವು. ಮುಜರಾಯಿ ಸಚಿವರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿ ರಾಜ್ಯದಲ್ಲೇ ಸಪ್ತಪದಿ ಎಂಬ ವಿನೂತನ ಕಲ್ಪನೆಯೊಂದಿಗೆ ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
ದೇವಸ್ಥಾನಗಳಿಗೂ ವಿಶೇಷ ಅನುದಾನ ಸಹಿತ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದರು ಮುಂದೆಯೂ ಕೊಟ್ಟ ಖಾತೆಯನ್ನು ಉತ್ತಮವಾಗಿ ನಿರ್ವಹಿಸುವ ಆರೋಗ್ಯ, ಭಾಗ್ಯ ಮತ್ತು ಒತ್ತಡದ ಕೆಲಸವನ್ನು ನಿಭಾಯಿಸುವ ಶಕ್ತಿ ನೀಡಲಿ ಎಂದರು.