ಕಾಸರಗೋಡು, ಆ 05 (DaijiworldNews/PY): ಕರ್ನಾಟಕಕ್ಕೆ ತೆರಳಲು ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಲಪಾಡಿಯಲ್ಲಿ ತಪಾಸಣಾ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕಾಸರಗೋಡು ಜಿಲ್ಲಾಡಳಿತ ತೀರ್ಮಾನಿಸಿದೆ. ತಲಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ತಪಾಸಣೆಯ ವ್ಯವಸ್ಥೆ ಮಾಡಲಾಗಿದ್ದು, ಮೂರು ಬ್ಯಾಚ್ಗಳಾಗಿ ತಪಾಸಣೆಗೆ ಸಜ್ಜುಗೊಳಿಸಲಾಗಿದೆ.
ಒಂದೇ ದಿನದಲ್ಲಿ ತಪಾಸಣಾ ವರದಿ ಲಭಿಸಲಿದ್ದು, ಮೊಬೈಲ್ ಫೋನ್ ಮೂಲಕ ವರದಿ ಲಭಿಸಲು ವ್ಯವಸ್ಥೆ ಮಾಡಲಾಗಿದೆ.
ತಪಾಸಣೆ ನಡೆಸಿದ ಮರುದಿನ ಮಧ್ಯಾಹ್ನ ಬಳಿಕ labsys.health.kerala. gov.in ವೆಬ್ ಸೈಟ್ ಮೂಲಕ ತಪಾಸಣಾ ವರದಿ ಡೌನ್ ಲೋಡ್ ಮಾಡಬಹುದಾಗಿದೆ.
ಮಂಗಲ್ಪಾಡಿ ತಾಲೂಕು ಆಸ್ಪತ್ರೆ ತಪಾಸಣೆಗೆ ನೇತೃತ್ವ ನೀಡುತ್ತಿದ್ದು, ಜಿಲ್ಲಾ ವೈದ್ಯಾಧಿಕಾರಿ ಡಾ. ಎ. ವಿ ರಾಮದಾಸ್, ತಾಲೂಕು ಆಸ್ಪತ್ರೆ ಮುಖ್ಯಸ್ಥ ಡಾ. ಶಾನ್ ಟಿ, ಅಧಿಕಾರಿ ಡಾ. ನಿರ್ಮಲ್, ಡಾ.ಪ್ರಸಾದ್ ಥಾಮಸ್, ಅಬ್ದುಲ್ ಲತೀಫ್ ಮೊದಲಾದವರು ನೇತೃತ್ವ ನೀಡುತ್ತಿದ್ದಾರೆ.