ಉಡುಪಿ, ಆ 04 (DaijiworldNews/MS): ಕುಂದಾಪುರ ತಾಲ್ಲೂಕು ಕೋಟೇಶ್ವರದ ಕಾಳಾವರ-ಅಸೋಡು ಬಳಿ ಜುಲೈ 30ರಂದು ನಡೆದಿದ್ದ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ ಆರೋಪಿ ಅನೂಪ್ ಶೆಟ್ಟಿಯನ್ನು ಘಟನಾ ಸ್ಥಳಕ್ಕೆ ಕರೆ ತಂದು ಪೊಲೀಸರು ಮಂಗಳವಾರ ಸ್ಥಳ ಮಹಜರು ಮಾಡಿದರು.
ಅಪರಾಧ ಕೃತ್ಯ ನಡೆದ ವಿವಿಧೆಡೆಗೆ ಆರೋಪಿಯನ್ನು ಕರೆತಂದ ಪೊಲೀಸರು ಬಳಿಕ ಗೋವಾಕ್ಕೆ ಕರೆದೊಯ್ದಿದ್ದಾರೆ.
ಅನೂಪ್ ಗೋವಾದ ಕೊಲ್ವಾ ಬೀಚ್ ಬಳಿ ಸೆರೆಸಿಕ್ಕಿದ್ದು ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ ಆರೋಪಿಯನ್ನು ಪೊಲೀಸರು ಗೋವಾಕ್ಕೆ ಕರೆದೊಯ್ದಿದ್ದಾರೆ.
ಆರೋಪಿ ಹತ್ಯೆಗೆ ಬಳಸಿರುವ ಡ್ರಾಗ್ಯರ್ ಈವರೆಗೆ ಪತ್ತೆಯಾಗಿಲ್ಲ ಈ ಬಗ್ಗೆ ತನಿಖೆ ಮುಂದುವರೆದಿದೆ ಆಗಸ್ಟ್ 9ರವರೆಗೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾನೆ. ಇದರ ನಡುವೆ ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ . ಅನೂಪ್ ವಿರುದ್ದ ಜಯೇಂದ್ರ ಶೆಟ್ಟಿ ಅಣ್ಣ ಮಹೇಂದ್ರ ಶೆಟ್ಟಿ ಕುಂದಾಪುರ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು