ಬಂಟ್ವಾಳ, ಆ. 03 (DaijiworldNews/SM): ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಬಂಟ್ವಾಳ ವೃತ್ತದ ಪೊಲೀಸ್ ಹಾಗೂ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥ ಸಂಚಲನ ನಡೆಯಿತು.
ಆಗಸ್ಟ್ 3ರಂದು ಮಂಗಳವಾರ ಬಿಸಿರೋಡಿನ ಸೂಕ್ಷ್ಮ ಪ್ರದೇಶಗಳಾದ ಫರಂಗಿಪೇಟೆ, ಕೈಕಂಬ, ಮೆಲ್ಕಾರ್, ಕಲ್ಲಡ್ಕ ಹಾಗೂ ವಿಟ್ಲ ಪೇಟೆಯಲ್ಲಿ ರ್ಯಾಪಿಡ್ ಆಕ್ಸನ್ ಪೋರ್ಸ್ (ಕ್ಷಿಪ್ರ ಕಾರ್ಯ ಪಡೆ ) ಪಥಸಂಚಲನ ನಡೆಸಿದರು. ಅವರ ಜೊತೆ ಬಂಟ್ವಾಳ ವೃತ್ತದ ಬಂಟ್ವಾಳ ನಗರ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಮೆಲ್ಕಾರ್ ಟ್ರಾಫಿಕ್ ಠಾಣಾ ಪೋಲೀಸರು ಪಥಸಂಚಲನದಲ್ಲಿ ಸಾಥ್ ನೀಡಿದರು.
ನಾಗರೀಕರ ರಕ್ಷಣೆ ಪೋಲೀಸ್ ಇಲಾಖೆಯ ಹೊಣೆಯಾಗಿದ್ದು, ಎಂತಹ ಕಠಿಣ ಸಂದರ್ಭದಲ್ಲಿ ಯೂ ಪೋಲೀಸ್ ಇಲಾಖೆಯ ಜೊತೆ ಅರೆಸೇನೆ ತುಕಡಿ ಸಹಾಯಕ್ಕೆ ಬರಲಿದೆ. ಇದು ಕರ್ನಾಟಕದ 97 ನೇ ಬ್ಯಾಚ್ ನ ತುಕಡಿಯಾಗಿದ್ದು, ಇದರಲ್ಲಿ 60 ಮಂದಿ ಸಿಬ್ಬಂದಿ ಇದ್ದಾರೆ. ಈ ತುಕಡಿಯಲ್ಲಿ ಡಿ.ಎಸ್.ಪಿ., ಸಿ.ಪಿ.ಐ ಮತ್ತು ಪಿ.ಎಸ್.ಐ.ಇರಲಿದ್ದಾರೆ.ಇದು ರಾಜ್ಯದ 23 ಜಿಲ್ಲೆಗಳಲ್ಲೂ ಸಂಚರಿಸಲಿದೆ ಎಂದರು.
ಕ್ಷಿಪ್ರ ಕಾರ್ಯ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ಶಹಜಾನ್ ಪಿ.ಕೆ, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸ್ ಐ ಅವಿನಾಶ್, ಗ್ರಾಮಾಂತರ ಎಸ್.ಐ. ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ, ಅಪರಾಧ ವಿಭಾಗದ ಎಸ್ಐ. ಸಂಜೀವ ಕೆ ಪಥಸಂಚಲನದಲ್ಲಿ ಪಾಲ್ಗೊಂಡರು.