ಉಡುಪಿ, ಆ 02 (DaijiworldNews/SM): ಸೆಪ್ಟೆಂಬರ್ 1ರಂದು ಹತ್ತು ಸಾವಿರ ಕಾರ್ಮಿಕರನ್ನು ಸೇರಿಸಿ ಕಲ್ಯಾಣ ಮಂಡಳಿ ಕೈಗೊಂಡ ಕಾರ್ಮಿಕ ವಿರೋಧಿ ತೀರ್ಮಾನಗಳನ್ನು ಕೈ ಬಿಡಲು ಆಗ್ರಹಿಸಿ ಬೆಂಗಳೂರಿನಲ್ಲಿರುವ ಕಲ್ಯಾಣ ಮಂಡಳಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ಕೆ ಮಹಾಂತೇಶ್ ತಿಳಿಸದರು.
ಅವರು ಸೋಮವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕಾರ್ಮೀಕ ಕಲ್ಯಾಣ ಮಂಡಳಿಯಲ್ಲಿ ಸುಮಾರು 10,400 ಕೋಟಿಯಷ್ಟು ಹಣವಿದ್ದರೂ ಯಾವುದೇ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಆಹಾರ ಕಿಟ್ ವಿತರಣೆ, ಸೇಪ್ಟೀ ಕಿಟ್, ತಂತ್ರಾಶ ಖರೀದಿಯಲ್ಲಿ ಸಾಕಾಷ್ಟು ಮೋಸ ನಡೆದಿದೆ. ಈಗ ಕಿಟ್ ವಿತರಣೆ ಶಾಸಕರ ಮುಖಾಂತರ ಕಾರ್ಮಿಕರಿಗೆ ದೊರೆಯುತ್ತಿದೆ. ಆದರೆ ಕಾರ್ಮಿಕರಿಗೆ ಕಿಟ್ನ ಅವಶ್ಯಕತೆ ಇಲ್ಲ. ಅವರಿಗೆ ದೊರೆಯುವ ಸರಕಾರದ 19 ಸೌಲಭ್ಯಗಳು ಸರಿಯಾಗಿ ಸಿಗಲಿ.
ಈ ಸಂಘಟನೆಯಲ್ಲಿ ಸಉಮಾರು 24 ಲಕ್ಷದಷ್ಟು ಸದಸ್ಯರು ನೋಂದಾವಣಿ ಆಗಿದ್ದು, ಸು. 6 ರಿಂದ 7 ಲಕ್ಷ ಮಂದಿ ಇಲಾಖೆಯ ಮೂಲಕ ನಕಲಿ ನೋಂದಾವಣಿ ಮಾಡಿಕೊಂಡು, ಹಣ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಂಕಷ್ಟ ಸಮಯದಲ್ಲು ನೈಜ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸವಲತ್ತು ಸಿಗಲಿಲ್ಲ. ಶಾಸಕರ ಮುಖಾಂತರ ಕಿಟ್ನ್ನು ಯಾಕೆ ಕೊಡಬೇಕಿತ್ತು ಇಲ್ಲಿ ಬಹಳಷ್ಟು ಅವ್ಯವಹಾರ ಅಗಿದೆ. ಹಾಗಾಗಿ ಮಂಡಳಿಯ ಮೇಲೆ ತನಿಖೆಗೆ ಆಗ್ರಹಿಸಿ ಮುತ್ತಿಗೆ ಹಾಕಲಾಗುವುದು ಎಂದು ಮಹಾಂತೇಶ್ ಎಚ್ಚರಿಕೆ ನೀಡಿದ್ದಾರೆ