ಮಲ್ಪೆ, ಅ 01 (DaijiworldNews/MS): ಪ್ರವಾಸಕ್ಕೆಂದು ಬಂದು ಆ. 01 ರ ಭಾನುವಾರ ಸಮುದ್ರದ ಪಾಲಾಗಿದ್ದ ಯುವತಿ ಇಂದು ಶವವಾಗಿ ಪತ್ತೆಯಾದ ಘಟನೆ ಮಲ್ಪೆ ಕಡಲಕಿನಾರೆಯಲ್ಲಿ ನಡೆದಿದೆ. ಉಡುಪಿಯ ಮಲ್ಪೆಯಲ್ಲಿ ನಿನ್ನೆ ಸಮುದ್ರಕ್ಕಿಳಿದಿದ್ದ ಯುವತಿ ಅಲೆಗಳ ರಭಸಕ್ಕೆ ಕೊಚ್ಚಿಹೋಗಿದ್ದರು.
ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಕೊಡುಗು ಮೂಲದ ದೇಚ್ಚಮ್ಮ ಸಾವಿಗೀಡಾದ ಯುವತಿಯಾಗಿದ್ದಾರೆ.
ಇಂದು ಬೆಳಗ್ಗೆ ಮಲ್ಪೆ ಸೀವಾಕ್ನ ಬಳಿ ದೇಚಮ್ಮ ಶವ ಪತ್ತೆಯಾಗಿದೆ. ಮೈಸೂರಿನ ಯುವಕನೊಂದಿಗೆ ಬಂದಿದ್ದ ಕೊಡಗು ಮೂಲದ ಮೂವರು ಯುವತಿಯರು, ಭಾನುವಾರ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್ಗಳ ಸೂಚನೆ ಲೆಕ್ಕಿಸದೇ ಅಲೆಗಳ ಜೊತೆಗೆ ಆಟವಾಡುತ್ತಿದ್ದರು.ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದರು. ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ದೇಚಮ್ಮ ನಾಪತ್ತೆ ಆಗಿದ್ದರು. ಇವತ್ತು ಅವರ ಶವ ಪತ್ತೆಯಾಗಿದೆ.
ಶವವನ್ನು ಮಣಿಪಾಲದ ಶವಾಗಾರಕ್ಕೆ ಸಾಗಿಸಿದ್ದು, ಜಿಲ್ಲಾ ನಾಗರಿಕ ಸಮಿತಿ ಸಂಚಾಲಕರಾದ ನಿತ್ಯಾನಂದ ಒಳಕಾಡು ಅವರು ಆ್ಯಂಬುಲೆನ್ಸ್ ಸೇವೆ ಒದಗಿಸಿದರು.ಸಬ್ ಇನ್ಸ್ ಪೆಕ್ಟರ್ ಈ ಸಕ್ತೀವೇಲು ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು.ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.