ಕಾಸರಗೋಡು, ಆ. 01 (DaijiworldNews/SM): ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ತ್ರಿಶ್ಯೂರು ಕೊಡಂಗಲ್ಲೂರಿನ ಸತ್ಯೇಶ್ ಕೆ.ಪಿ. ಯಾನೆ ಕಿರಣ್(35) ಬಂಧಿತ ಆರೋಪಿಯಾಗಿದ್ದಾನೆ.
ಈತನ ವಿರುದ್ಧ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಹಲವು ಪ್ರಕರಣ ದಾಖಲಾಗಿವೆ.
ಜುಲೈ 26ರಂದು ಮುಂಜಾನೆ ದರೋಡೆ ನಡೆದಿತ್ತು. ಕಾವಲುಗಾರನನ್ನು ಕಟ್ಟಿ ಹಾಕಿ ಹದಿನೈದು ಕಿಲೋ ಬೆಳ್ಳಿ ಆಭರಣ, ನಾಲ್ಕೂವರೆ ಲಕ್ಷ ರೂ. ದರೋಡೆ ಮಾಡಲಾಗಿತ್ತು. ಈ ಪೈಕಿ ನಾಲ್ಕೂವರೆ ಕಿಲೋ. ಬೆಳ್ಳಿ ಆಭರಣ, ಒಂದೂವರೆ ಲಕ್ಷ ರೂ. ಹಾಗೂ ದರೋಡೆಕೋರರು ಸಂಚರಿಸಿ ದ್ದ ಇನ್ನೋವಾ ಕಾರನ್ನು ಉಳ್ಳಾಲ ಪೊಲೀಸರು ತಲಪಾಡಿ ಸಮೀಪ ದಿಂದ ವಶ ಪಡಿಸಿ ಕೊಂಡಿದ್ದರು.