ಕಾರ್ಕಳ, ಆ.01 (DaijiworldNews/HR): ನಿಶಕ್ತರ ಸೇವೆಗೈಯುವ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಸೇವೆಯಿಂದ ಸಂತೃಪ್ತಿ ಪಡೆಯಬಹುದು. ಕೈಯಿಂದ ಆಗುವ ಕೆಲಸ ಕಾರ್ಯಗಳನ್ನು ಮಾಡುವುದು ಕೂಡಾ ಸೇವೆಯ ಒಂದು ಭಾಗವಾಗಿದೆ. ಸೇವಾ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಜನಪರವಾದ ಸೇವೆಗಳನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಿದ್ದೇನೆ ಎಂದು. ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷ ಬಿ.ರಾಜೇಶ್ ಶೆಣೈ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಕಳ ಸವಿತಾ ಬಾಕ್ವೇಟ್ ಸಭಾಂಗಣದಲ್ಲಿ ಭಾನುವಾರ ನಡೆದ ಲಯನ್ಸ್ ಕ್ಲಬ್ ಕಾರ್ಕಳದ ನೂತನ ಅಧ್ಯಕ್ಷ ಸ್ಥಾನ ಅಲಂಕರಿಸಿ ಅವರು ಮಾತನಾಡಿದ ಅವರು, ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ವೇಣುಧರ್ ಜಿ.ಶೆಟ್ಟಿ ಪದಗ್ರಹಣ ಸಮಾರಂಭದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ಕಾರ್ಕಳ ಲಯನ್ಸ್ ಸಂಸ್ಥೆ ಕಳೆದ 55 ವರ್ಷಗಳಿಂದ ನೀಡಿದ ಉತ್ತಮ ಸೇವೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ. ಮನುಕುಲದ ಸೇವೆ ಎಂಬ ಶುದ್ದ ಸಂಕಲ್ಪದ ಜತೆಗೆ ಪವಿತ್ರ ಉದ್ದೇಶವನ್ನು ಹೊಂದಿಕೊಂಡು, ಶತಮಾನಗಳ ಹಿಂದೆ ಹುಟ್ಟಿಕೊಂಡ ಈ ಲಯನ್ಸ್ ಸಂಸ್ಥೆ ಪ್ರಸ್ತುತ ಜಗತ್ತಿನಾದ್ಯಂತ ಮಾನ್ಯತೆ ಪಡೆದಿದೆ. ಲಯನ್ಸ್ನ ಸದಸ್ಯರು ನಾವು ಎಂಬುವುದೇ ಒಂದು ಅಭಿಮಾನ ಎಂದು ಹೇಳಿದ್ದಾರೆ.
ಲಯನ್ ಇಂದ್ರಾಳಿ ಜಯಕರ ಶೆಟ್ಟಿ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ನೆರವೇರಿಸಿದರು. ಸಂತೋಷ ಭಾವನೆಗೆ ವ್ಯಕ್ತವಾಗಿ ಕರತಾಡನ ಬಾರಿಸುತ್ತಾರೆ. ದುಃಖದ ಸಂದರ್ಭದಲ್ಲಿ ಕಣ್ಣೀರು ಒರೆಸುವ ಎರಡು ಬೆರಳುಗಳಿದ್ದರೆ ಸಾಕು ಎನ್ನುವ ಮನೋಭಾವವನ್ನು ಪ್ರತಿಯೊಬ್ಬನ ಹ್ಲದಯದಲ್ಲಿ ಇರಿಸಿಕೊಂಡಾಗ ಸಮಾಜ ಸೇವೆಗೆ ಸಹಕಾರಿಯಾಗಲಿದೆ ಎಂದರು.
ಮುಂಡ್ಕೂರು ಲಯನ್ಸ್ ಶಾಲಾ ಸಭಾಭವನಕ್ಕೆ 25 ಸಾವಿರ ರೂ, ಕೊರೊನಾ ಸಂದರ್ಭ ಅಂಬ್ಯುಲೆನ್ಸ್ ವಾಹನಕ್ಕೆ ಇಂಧನ ಒದಗಿಸಿರುವ ವೆಚ್ಚ 18 ಸಾವಿರ ರೂ, ಕಾರ್ಕಳ ನಗರ ಠಾಣೆಗೆ ಕಂಪ್ಯೂಟರ್, ವಿದ್ಯಾರ್ಥಿಗಳಿಗೆ ೫ ಕಂಪ್ಯೂಟರ್ ಹಾಗೂ ವಿದ್ಯಾರ್ಥಿ ವೇತನ ಕೊಡುಗೆ ರೂಪದಲ್ಲಿ ನೀಡುವ ಮೂಲಕ ಕಾರ್ಕಳ ಲಯನ್ಸ್ ಕ್ಲಬ್ ಮಾದರಿ ಎನ್ನಿಸಿಕೊಂಡಿದೆ.
ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಕೆ,ರಾವ್, ಕಾರ್ಯದರ್ಶಿ ಸುಭಾಸ್ ಸುವರ್ಣ, ಕೋಶಾಧಿಕಾರಿ ಉದಯ ಕುಮಾರ್ ಶೆಟ್ಟಿ, 2021.22ನೇ ಸಾಲಿನ ನೂತನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಪಿಂಟೋ, ಮಿಥುನ್ ಹೆಗ್ಡೆ, ಚಂದ್ರಹಾಸ ಸುವರ್ಣ ಉಪಸ್ಥಿತರಿದ್ದರು.