ಉಡುಪಿ, ಜು.31 (DaijiworkldNews/HR): ಕೋಟ ಶ್ರೀನಿವಾಸ ಪೂಜಾರಿ ದೊಡ್ಡ ಬಂಗಲೆಯನ್ನು ಕಟ್ಟಿಸುತ್ತಿಲ್ಲ, ಬೇರೆ ನಾಯಕರ ತರಹ 50 ಕೋಟಿ ಮನೆ ಕಟ್ಟಲು ಹೊರಟಿಲ್ಲ. ಶ್ರೀನಿವಾಸ ಪೂಜಾರಿಯವರೇ ಇಂತಹ ಆರೋಪಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದ್ದು, ಶಾಸಕ, ಮಂತ್ರಿಯಾದವರು ಮನೆ ಕಟ್ಟುವುದು ಅಪರಾಧವಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿದರೆ ಅದು ಅಪರಾಧ. ಆದರೆ ಮೂರು ಅವಧಿಗೆ ಕೋಟ ಶಾಸಕರಾಗಿ ಆಯ್ಕೆಯಾದವರು ಹಾಗಾಗಿ ಅವರಿಗೆ ಸಂಬಳ, ಹಲವಾರು ಭತ್ಯೆಗಳು ಬರುತ್ತದೆ ಅದರಿಂದ ಮನೆ ಕಟ್ಟಿದ್ದಾರೆ" ಎಂದಿದ್ದಾರೆ.
"ರಾಜಕಾರಣದಲ್ಲಿ ಇಂತ ಅಪಪ್ರಚಾರ ಸಾಮಾನ್ಯ. ಇಂತದ್ದನ್ನೆಲ್ಲಾ ನಮ್ಮ ಜನ ನಂಬುವುದಿಲ್ಲ. ಹಾಗಾಗಿ ನೀವು ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ, ಮಂತ್ರಿ ಮಂಡಲ ವಿಸ್ತರಣೆ ಆಗುತ್ತಿರುವಾಗ ಇಂತದ್ದೆಲ್ಲ ಸಾಮಾನ್ಯ" ಎಂದರು.
ಇನ್ನು ಶ್ರೀನಿವಾಸ ಪೂಜಾರಿಯವರ ವಿರೋಧಿಗಳು, ಕಾಂಗ್ರೆಸ್ ಪಕ್ಷದವರು ಫೋಟೋ ಬರಹ ಬಿಟ್ಟಿರಬಹುದು. ರಾಜಕೀಯಕ್ಕೆ ಬಂದ ಮೇಲೆ ಇಂತಹ ಆರೋಪಗಳಿಗೆ ಬೇಸರ ಮಾಡಿಕೊಳ್ಳಬಾರದು" ಎಂದು ಹೇಳಿದ್ದಾರೆ.