ಕುಂದಾಪುರ, ಜು. 29 (DaijiworldNews/SM): ನಕ್ಸಲ್ ರೆಂದು ಆತಂಕ ಸೃಷ್ಠಿಸಿದ್ದ ನಾಲ್ವರು ಬೇಟೆಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ಶೆಡಿ ಮನೆಗ್ರಾಮದ ಅಮಾಸೆಬೈಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಸಮ್ಮನಕಾನು ತೋಟದ ಸಮೀಪ ನಡೆದಿದೆ.
ಬೇಟೆಗೆಂದು ಬಂದ ಕಾರ್ಕಳ ಮೂಲದ ಆರೋಪಿಗಳಾದ ಸ್ಟಾನಿ ಪಾಯಸ್(50), ಮೋಹನ (46)ಮೇಲ್ವಿನ್ ಪ್ರಾಕ್ಸಿ ಡಿಸೋಜ(38), ಅಕ್ಷಯ ಪೂಜಾರಿ (23), ಇವರನ್ನು ವಶಕ್ಕೆ ಪಡೆದಿರುವ ಪೊಲೀಸರು ಕೇಸು ದಾಖಲಿಸಿದ್ದಾರೆ.
ಇಲ್ಲಿಯ ನಿವಾಸಿ ಸುಕುಮಾರ ಶೆಟ್ಟಿಯವರ ಮನೆ ಹತ್ತಿರ ತಡರಾತ್ರಿ ಏಕಾಏಕಿ ಬಂದೂಕಿನ ಗುಂಡಿನ ಶಬ್ದ ಕೇಳಿ ಬಂದಿದೆ. ಎಚ್ಚತ್ತ ಮನೆಯವರು ಹೊರಗೆ ಬಂದು ನೋಡಿದಾಗ ಅಲ್ಲಿ ನಾಲ್ವರು ಆಗಂತಕರ ಸಂಚಾರ ಕಂಡು ಬಂದಿದೆ. ಇನ್ನು ಇದು ನಕ್ಸಲ್ ಸೂಕ್ಷ್ಮ ಪ್ರದೇಶವಾದ್ದರಿಂದ ಸಹಜವಾಗಿ ಮನೆಯವರು ಆರಂಭದಲ್ಲಿ ಗಾಬರಿಗೊಂಡಿದ್ದರು. ಆದರೆ ನಂತರ ಅವರನ್ನು ವಿಚಾರಿಸಿದಾಗ ಆರೋಪಿಗಳು ಕೋವಿಸಹಿತ ಬೇಟೆಗೆ ಬಂದಿರುವ ವಿಚಾರ ತಿಳಿದು ಬಂದಿದೆ.