ಕುಂದಾಪುರ, ಜು 28 (DaijiworldNews/PY): "ಕೊರೊನಾ 3ನೇ ಅಲೆಯ ಬಗ್ಗೆ ಬೇಜಾವ್ದಾರಿ ಬೇಡ. ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿದೆ. ವ್ಯಾಕ್ಸಿನ್ ಬಗ್ಗೆ ನೆಗಿಟಿವ್ ಚಿಂತೆ ಬಿಟ್ಟು ಲಸಿಕೆ ಪಡೆದುಕೊಳ್ಳಿ. ಈಗಾಗಲೇ ಲಸಿಕೆಗೆ ಸಾಕಷ್ಟು ಬೇಡಿಕೆಗಳಿದ್ದು ಸಾರ್ವಜನಿಕರು ಲಸಿಕೆ ಸಿಗದೇ ಪರದಾಡುತ್ತಿದ್ದಾರೆ. ಆದ್ಯತೆಗೆ ಅನುಗುಣವಾಗಿ ಈಗಾಗಲೇ 45ರ ವಯೋಮಿತಿಯಲ್ಲಿ ಶೇ 95ರಷ್ಟು ಲಸಿಕೆಯನ್ನು ನೀಡಲಾಗಿದೆ" ಎಂದು ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಹೇಳಿದರು.
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದ ಸಭಾಭವನದಲ್ಲಿ ಬುಧವಾರ ಜರುಗಿದ ಕೋಟೇಶ್ವರ ಗ್ರಾಮ ಪಂಚಾಯತ್ನ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, "ಈಗಾಗಲೇ ತೆರಿಗೆ ಬಾಕಿ ಇರುವುದನ್ನು ಶೀಘ್ರವಾಗಿ ವಸೂಲಾತಿಗೆ ಮುಂದಾಗುವ ಮೂಲಕ ಗ್ರಾಮದ ಅಭಿವೃದ್ಧಿಗೆ ಮುಂದಾಗುತ್ತೇವೆ. ಕಸದ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ರಾತ್ರೋರಾತ್ರಿ ತಂದು ಏಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಇಬ್ಬರು ಸಿಬ್ಬಂದಿಗಳನ್ನು ನೇಮಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದರು.
ಕುಂದಾಪುರ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಾಬಣ್ಣ ಪೂಜಾರಿ, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ಸುಧನ್ವಕೃಷ್ಣ, ಮೀನುಗಾರಿಕಾ ಇಲಾಖೆ ಮೇಲ್ವಿಚಾರಕ ಜೆ.ಎಂ.ವಿಶ್ವನಾಥಯ್ಯ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಬಿ.ಪ್ರಭಾವತಿ ಶೆಟ್ಟಿ, ಕುಂದಾಪುರ ಪೊಲೀಸ್ ಠಾಣೆ ಎಎಸ್ಐ ನವೀನ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ, ಸದಸ್ಯರಾದ ಜಯಲಕ್ಷ್ಮೀ, ಚಂದ್ರಮೋಹನ್, ಲೋಲಾಕ್ಷಿ ಎನ್ ಕೋತ್ವಾಲ್, ಲೋಕೇಶ್ ಜೆ, ಪುಟ್ಟಿ, ಆಶಾ ವಿ, ನೇತ್ರಾವತಿ, ರಾಜಶೇಖರ್ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿಗಾರ್, ಸುರೇಶ್ ದೇವಾಡಿಗ, ರೋಯ್ಸನ್ ಡಿ ಮೆಲ್ಲೋ, ಲತಾ ಶೇಖರ ಮೊಗವೀರ, ಶೋಭಾ ಶೆಟ್ಟಿ, ನಾಗರಾಜ್ ಕಾಂಚನ್, ರಾಘವೇಂದ್ರ ಪೂಜಾರಿ, ನಾಗರಾಜ ಪೂಜಾರಿ, ಜಾನಕಿ ಬಿಲ್ಲವ, ರೇವತಿ, ರಾಜು, ಉದಯ ನಾಯಕ್, ಆಶಾ ಕುಂದರ್, ರಾಜು ಮರಕಾಲ, ವಿವೇಕ್, ಸುಶೀಲ ಉಪಸ್ಥಿತರಿದ್ದರು. ಪಿಡಿಒ ತೇಜಪ್ಪ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.