ಮಂಗಳೂರು,ಜು 27 (DaijiworldNews/MS): ಸ್ವಸ್ತಿಕ್ ಕಲಾಕೇಂದ್ರ (ರಿ) ಜಲ್ಲಿಗುಡ್ಡೆ ಇದರ ವತಿಯಿಂದ ಅಂಬಾ ಭವಾನಿ ಭಜನಾ ಮಂದಿರದ ಸಭಾಭವನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ಬಿ. ಪ್ರಕಾಶ್ ಪೈ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ. ವತ್ಸಲಾ ಮಲ್ಲಿ ,ಹರಿಕೇಶವಜಿ ರಾವ್ ಯಾದವ್ ಹಾಗೂ ಮೋಹನ್ ಕೊಟ್ಟಾರಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಂಗ್ರಹಿಸಿಸಲಾದ ಹೊಳೆ ದಾಸವಾಳ,ನೇರಳೆ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಸಂಗ್ರಹಿಸಲಾದ ಅಲಂಕಾರಿಕ ಕ್ರಾಟನ್ ಹಾಗೂ ಹೂವಿನ ಗಿಡಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆ ಗಳಾದ ಅಂಬಾ ಭವಾನಿ ಭಜನಾ ಮಂದಿರ ,ಎಕ್ಸ್ ಫೋ ಫ್ರೆಂಡ್ಸ್ ಕ್ಲಬ್, ಜಲ್ಲಿಗುಡ್ಡೆಒಡಿಯೂರು ಸ್ವ ಸಹಾಯ ಸಂಘ, ಜಲ್ಲಿಗುಡ್ಡೆ, ಶಿವ ಮಂದಿರ ಪಲ್ಲಕೆರೆ,ಪ್ರಶಾಂತಿ ಮಹಿಳಾ ಮಂಡಲ, ಅಂಬಾ ಭವಾನಿ ಸ್ವಸಹಾಯ ಸಂಘ ಹಾಗೂಮಹಾದೇವಿ ಭಜನಾಮಂದಿರ ಸೇರಿದಂತೆ ಎಲ್ಲಾ ಸಂಸ್ಥೆಗಳ ಅಧ್ಯಕ್ಷ ರುಗಳು ಕ್ರಮವಾಗಿ ಅತಿಥಿ ಗಳಿಂದ ಸಸಿಗಳನ್ನು ಸ್ವೀಕರಿಸಿದರು. ಈ ಸಂದರ್ಭ ಉಷಾ ಟೀಚರ್ ಪರಿಸರ ಸಂರಕ್ಷಣೆ ಯ ಬಗ್ಗೆ ವಿವರವಾದ ಪ್ರಭಂದ ಮಂಡಿಸಿದರು. ಕಲಾ ಕೇಂದ್ರದ ನಾಗೇಶ್ ಎಂ.,ಆನಂದ ರಾವ್, ಮಲ್ಲಿಕಾ ರಾವ್ ಮೋಹನ್ ಕುಮಾರ್, ವಿಜಯಕುಮಾರ್,ಸುಮಲತಾ ಪ್ರೇಮ ಭವಾನಿ ಮೇಜಿ ಡಿ' ಸೋಜಾ ಉಪಸ್ಥಿತರಿದ್ದರು.
ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗಿ ಬಹುಮಾನ ವಿತರಿಸಲಾಯಿತು. ಅಧ್ಯಕ್ಷ ಪ್ರಜ್ವಲ್ ಡಿ.ಕೆ. ಸ್ವಾಗತಿಸಿ ಸಂತೋಷ್ ಕುಮಾರ್ ಧನ್ಯವಾದವಿತ್ತರು. ಪ್ರದಾನ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.