ಮಂಗಳೂರು, ಜು. 26 (DaijiworldNews/SM): ಕರಾವಳಿಯಲ್ಲಿ ಸಂಚಾರ ನಡೆಸುವ ಖಾಸಗಿ ಬಸ್ ಗಳ ಪ್ರಯಾಣ ದರ ಏರಿಕೆಯಾಗಿದೆ. ಜುಲೈ ೨೬ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಕಾರಿಗಳು ಈ ಕುರಿತಂತೆ ಆದೇಶ ನೀಡಿದ್ದಾರೆ.
ದಕ್ಷಿಣ ಕನ್ನಡದ ಕೆನರಾ ಬಸ್ಸು ಮಾಲಕರ ಸಂಘ ಮಂಗಳೂರು ಹಾಗೂ ಉಡುಪಿಯ ಕರಾವಳಿ ಬಸ್ಸು ಮಾಲಕರ ಸಂಘ ಪ್ರಯಾಣ ದರ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದೀಗ ಮನವಿ ಮತ್ತು ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 2021ರ ಜುಲೈ 26 ರಿಂದ ಅನ್ವಯವಾಗುವಂತೆ ಖಾಸಗಿ ಬಸ್ಸು ಪ್ರಯಾಣದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ.
ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ಮಜಲು ವಾಹನಗಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಲೋ.ಮೀ.ಗೆ ಕನಿಷ್ಟ ಮೊತ್ತ 00.04 ಪೈಸೆಯಂತೆ ವಸೂಲಿಸಲು ಬಸ್ಸು ಮಾಲಕರಿಗೆ ನಿರ್ದೇಶನ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಟಿ ಬಸ್ ಗಳಲ್ಲಿ ಎರಡು ಕಿಲೋ ಮೀಟರ್ ಒಳಗಡೆ ಸಂಚಾರ ನಡೆಸುವವರಿಗೆ ಈ ಹಿಂದೆ ಇದ್ದ 7 ರೂಪಾಯಿ ಪ್ರಯಾಣ ದರವನ್ನು 12 ರೂಪಾಯಿಗಳಿಗೆ ಏರಿಸಲಾಗಿದೆ. 2ರಿಂದ 6 ಕಿ.ಮೀ. ಪ್ರಯಾಣಕ್ಕೆ 15 ರೂ. ದರ ನಿಗಧಿಪಡಿಸಲಾಗಿದೆ. ಗ್ರಾಮಾಂತರದ ಪ್ರಯಾಣಕ್ಕೂ ಇದೇ ದರ ಅನ್ವಯವಾಗಲಿದೆ.
4 6ರಿಂದ 8 ಕಿ.ಮೀ. ಪ್ರಯಾಣಕ್ಕೆ 16 ರೂ., 8ರಿಂದ 10 ಕಿ.ಮೀ. ಪ್ರಯಾಣಕ್ಕೆ 18 ರೂ. 10ರಿಂದ 12 ಪ್ರಯಾಣಕ್ಕೆ 19ರೂಪಾಯಿ, 12ರಿಂದ 14 ಕಿ.ಮೀ. ಪ್ರಯಾಣಕ್ಕೆ 20 ರೂ. ನಿಗದಿಯಾಗಿದೆ.