ಮಂಗಳೂರು, ಜು. 25 (DaijiworldNews/SM): ಸುಳ್ಯ ತಾಲೂಕಿನಲ್ಲಿ ಭಾರಿ ಮಳೆಯ ಮಧ್ಯೆಯೇ ಆರೋಗ್ಯ ಕಾರ್ಯಕರ್ತರು ಕಾಡಿನ ದಾರಿಯ ಮಧ್ಯೆ ಸ್ವಾಬ್ ಸಂಗ್ರಹಿಸಲು ತೆರಳಿದ್ದು, ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಕೊಲ್ಲಮೊಗರ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಕೋವಿಡ್ ಸ್ವ್ಯಾಬ್ ಸಂಗ್ರಹಿಸಲು ದಟ್ಟವಾದ ಕಾಡಿನಲ್ಲಿ ನದಿ ದಾಟಿಕೊಂಡು ಹೋಗುತ್ತಿದ್ದರು. ಪ್ರಕೃತಿ ವಿಕೋಪದ ನಡುವೆಯೂ ಧೈರ್ಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೆಗೆ ಕಾರಣವಾಗಿದೆ.