ಕಾರ್ಕಳ, ಜು.25 (DaijiworldNews/HR): ತಾಲೂಕಿನಲ್ಲಿ ಬಹಳಷ್ಟು ರಕ್ತದಾನ ಶಿಬಿರಗಳ ಮೂಲಕ ಸಾಕಷ್ಟು ರಕ್ತದಾನಗಳು ರಕ್ತದಾನ ಮಾಡುತ್ತಿದ್ದರೂ, ರಕ್ತದ ಅಗತ್ಯವಿದ್ದಾಗ ಜಿಲ್ಲಾ ಪ್ರಮುಖ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಕಳ ತಾಲೂಕು ಕೇಂದ್ರದಲ್ಲಿ ಸೂಕ್ತವಾದ ರಕ್ತ ಸಂಗ್ರಹಣಾ ಕೇಂದ್ರ ಅಗತ್ಯ ಬೇಕಾಗಿದೆ. ಅದಕ್ಕೆ ತಾಲೂಕು ರೆಡ್ ಕ್ರಾಸ್ ಸಂಶ್ಥೆ ಪೂರ್ತಿ ಸಹಕಾರ ನೀಡುತ್ತದೆ ಅದರ ವ್ಯವಸ್ಥೆಗೆ ಸೂಕ್ತ ದಾನಿಗಳೂರು ಕಾರ್ಕಳದಲ್ಲಿ ಇದ್ದಾರೆ ಎಂದು ಕಾರ್ಕಳ ತಾಲೂಕು ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಡಾ. ಕೆ.ಆರ್. ಜೋಶಿ ಹೇಳಿದರು.
ನಿಟ್ಟೆ ಕಲಂಬಾಡಿ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಬೃಹತ್ ರಕ್ತದಾನ ಶಿರಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ರಕ್ತ ನಿಧಿ ಕೇಂದ್ರದ ಡಾ. ವೀಣಾ, ವಿವಿಧ ಸಂಘದ ಸಂಸ್ಥೆಗಳ ಮುಖಂಡರಾದ ಸಂತೋಷ್ ಕುಮಾರ್ ಜೈನ್, ಸುರೇಶ್ ನಾಯಕ್, ಬಾಲಕೃಷ್ಣ ಮೂಲ್ಯ, ಶ್ರೀಧರ್ ಸುವರ್ಣ, ಸಂತೋಷ್ ಕುಲಾಲ್, ರಮಾನಂದ ಪೂಜಾರಿ,ರಮಣಿ ಕುಲಾಲ್ ಉಪಸ್ಥಿತರಿದ್ದರು.
ದಿವಾಕರ ಬಂಗೇರ ಸ್ವಾಗತಿಸಿ ನಿರೂಪಿಸಿದರು. ಸಂತೋಷ್ ಕುಲಾಲ್ ವಂದಿಸಿದರು.