ಮಂಗಳೂರು, ಜು 25 (DaijiworldNews/PY): ದಕ್ಷಿಣ ಕೆನರಾ ಕ್ಯಾಥೊಲಿಕ್ ಅಸೋಸಿಯೇಷನ್ (ಸಿಎಎಸ್ಕೆ) ಇಲ್ಲಿನ ಬಿಷಪ್ ಮನೆಯಲ್ಲಿ ಜುಲೈ 24 ರ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನವನ್ನು ವಿತರಿಸಿದೆ.
ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಿದರು.
ಮಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರು ಡಯೋಸಿಸ್ಗಳ 32 ಫಲಾನುಭವಿಗಳಿಗೆ 7 ಲಕ್ಷ ಮೌಲ್ಯದ ಕೊರೊನಾ ವಿದ್ಯಾರ್ಥಿವೇತನವನ್ನು ಸಿಎಎಸ್ಕೆ ವಿತರಿಸಿದೆ.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, "ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ಸಿಎಎಸ್ಕೆ ಉತ್ತಮ ಕಾರ್ಯ ಮಾಡುತ್ತಿದೆ. ಈ ಉತ್ತಮ ಕಾರ್ಯ ಹೀಗೆ ಮುಂದುವರಿಯಲಿ" ಎಂದಿದ್ದಾರೆ.
ಸಿಎಎಸ್ಕೆ ಅಧ್ಯಕ್ಷ ಕ್ಯಾ.ವಿನ್ಸೆಂಟ್ ಪಯಾಸ್ ಸ್ವಾಗತಿಸಿದರು, ಸಿಎಎಸ್ಕೆ ಉಪಾಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಆನಂದ್ ಪೆರೇರಾ ಧನ್ಯವಾದವಿತ್ತರು.
ಕ್ಯಾ.ಅರುಲ್ ಅರಾನ್ಹಾ, ಖಜಾಂಜಿ ನೊಬರ್ಟ್ ಶೆನಾಯ್, ಉಪಾಧ್ಯಕ್ಷ ಮಾರಿಯೋ ಸಲ್ಡಾನ್ಹಾ, ಜಂಟಿ ಕಾರ್ಯದರ್ಶಿ ಗುಲೋಬಿ ಫೆರ್ನಾಂಡಿಸ್, ಡಾ. ಡೆರೆಕ್ ಲೋಬೊ, ಉಲ್ಹಾಸ್ ರಾಸ್ಕ್ವಿನ್ಹಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.