ಮಂಜೇಶ್ವರ, ಜು.24 (DaijiworldNews/HR): ಕಡಲ್ಕೊರೆತದಿಂದ ಹಾನಿಗೀಡಾದ ಉಪ್ಪಳ ಮುಸೋಡಿ ಅದಿಕ ತೀರಕ್ಕೆ ಹಾಗೂ ಮಂಜೇಶ್ವರ ಬಂದರಿಗೆ ಕೇರಳ ಮೀನುಗಾರಿಕಾ ಹಾಗೂ ಬಂದರು ಸಚಿವ ಸಜಿ ಚೆರಿಯನ್ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೀನುಗಾರರ ಆತಂಕಕ್ಕೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಮಂಜೇಶ್ವರ ಬಂದರಿನ ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಸಚಿವರು ಹೇಳಿದರು.
ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕರಾದ ಎ.ಕೆ.ಎಂ ಅಶ್ರಫ್, ಸಿ.ಎಚ್ ಕುಞ೦ಬು, ಕೆ.ಆರ್ ಜಯಾನಂದ, ಬಂದರು ಇಂಜಿನಿಯರಿಂಗ್ ಇಲಾಖಾ ಮುಖ್ಯ ಇಂಜಿನೀಯರ್ ಜೊಮೋನ್ ಜೋರ್ಜ್, ಕುಂಞ ಮಮ್ಮು ಮೊದಲಾದವರು ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು.