ಕಾಸರಗೋಡು, ಜು.24 (DaijiworldNews/HR): ನಿರ್ಮಾಣ ಹಂತದಲ್ಲಿದ್ದ ಮನೆ ಮೇಲಿಂದ ಕೆಳಗೆ ಬಿದ್ದು ವಯರಿಂಗ್ ಕಾರ್ಮಿಕ ಮೃತಪಟ್ಟ ಘಟನೆ ಶನಿವಾರ ಪಾಲಕುನ್ನುನಲ್ಲಿ ನಡೆದಿದೆ.
ಮೃತಪಟ್ಟವರನ್ನು ಪಾಲಕುನ್ನು ಕನಿಯಂಪಾಡಿಯ ಸಂಜೀವ (30) ಎಂದು ಗುರುತಿಸಲಾಗಿದೆ.
ಕೆಲಸ ನಿರತರಾಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದ ಸಂಜೀವ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸಂಜೀವ ಅವರು ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ತಂಡದ ಸದಸ್ಯರಾಗಿದ್ದು, ಜಿಲ್ಲೆಗೆ ಪದಕವನ್ನು ಪಡೆದಿದ್ದರು.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.