ಮಂಗಳೂರು, ಜು 24 (DaijiworldNews/MS): ಅಪರಾಧ ಪತ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸುಧಾ ಕ್ಯಾನ್ಸರ್ ಗೆ ಬಲಿಯಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಜು.24 ರ ಶನಿವಾರ ನೆರವೇರಿಸಲಾಯಿತು.
2011ರ ಮಾರ್ಚ್ 15ರಂದು ಜನಿಸಿದ್ದ ಸುಧಾ ಡೋಬರ್ಮನ್ ಪಿನ್ಷರ್ ತಳಿಯ ಶ್ವಾನವಾಗಿದ್ದು , 2012ರ ಎಪ್ರಿಲ್ 02 ರಂದು ಸೂಕ್ತ ತರಬೇತಿಯೊಂದಿಗೆ ಮಂಗಳೂರು ಪೊಲೀಸ್ ಘಟಕದ ಶ್ವಾನದಳವನ್ನು ಸೇರಿತ್ತು.
ಮಂಗಳೂರು ನಗರ ಪೊಲೀಸರೊಂದಿಗೆ ಅಪರಾಧ ವಿಭಾಗದಲ್ಲಿ ಸುಮಾರು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಸುಧಾ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದೆ.
ಇಲಾಖೆಯಲ್ಲಿ ಸಂದೀಪ್ ಅವರು ಸುಧಾ ಶ್ವಾನದ ನಿರ್ವಾಹಕರಾಗಿದ್ದರು. ಅನಾರೋಗ್ಯಕ್ಕೆ ತುತ್ತಾಗಿ ಸುಧಾ ಸಾವಿಗೀಡಾಗಿದ್ದು, ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ
ಇನ್ನು ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಯ ಶ್ವಾನ ಸಹಕರಿಸಿತ್ತು, ಎರಡು ಕೊಲೆ ಪ್ರಕರಣಗಳ ಮೃತದೇಹ ಪತ್ತೆಕಾರ್ಯ ಹಾಗೂ ಗಂಭೀರ ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಪ್ರಕರಣಗಳ ಪತ್ತೆಹಚ್ಚುವಲ್ಲಿ ಸಹಕರಿಯಾಗಿತ್ತು.
ಡಾಗ್ ಸ್ವ್ಕಾಡ್ನಲ್ಲಿ ಅತ್ಯಂತ ಚುರುಕಾದ ಶ್ವಾನ ಇದಾಗಿದ್ದು, ಅದಷ್ಟು ಶೀಘ್ರವಾಗಿ ಪರ್ಯಾಯವಾಗಿ ಮತ್ತೊಂದು ನಾಯಿಗೆ ತರಬೇತಿ ನೀಡಲಾಗುತ್ತದೆ. ಇನ್ನೆರಡು ನಾಯಿಗಳನ್ನು ತರಬೇತಿ ನೀಡಿ ಇಲಾಖೆಗೆ ಸೇರ್ಪಡೆ ಮಾಡಲಾಗುತ್ತದೆ.