ಮಂಜೇಶ್ವರ, ಜು 24 (DaijiworldNews/MS): ಕಡಲ್ಕೊರೆತದಿಂದ ಹಾನಿಗೀಡಾದ ಉಪ್ಪಳ ಮುಸೋಡಿ ಅದಿಕ ತೀರಕ್ಕೆ ಕೇರಳ ಮೀನುಗಾರಿಕಾ ಹಾಗೂ ಬಂದರು ಸಚಿವ ಸಜಿ ಚೆರಿಯನ್ ಜು.24 ರ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೀನುಗಾರರ ಆತಂಕಕ್ಕೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಮಂಜೇಶ್ವರ ಬಂದರಿನ ಉಳಿದ ಕಾಮಗಾರಿ ಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಸಚಿವರು ಹೇಳಿದರು.
ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ , ಶಾಸಕರಾದ ಎ . ಕೆ . ಎಂ ಅಶ್ರಫ್, ಸಿ . ಎಚ್ ಕುಞ೦ಬು, ಕೆ .ಆರ್ ಜಯಾನಂದ, ಬಂದರು ಇಂಜಿನಿಯರಿಂಗ್ ಇಲಾಖಾ ಮುಖ್ಯ ಇಂಜಿನೀಯರ್ ಜೊಮೋನ್ ಜೋರ್ಜ್ , ಕುಂಞ ಮಮ್ಮು ಮೊದಲಾದವರು ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು. ಬಳಿಕ ಸಚಿವರು ಕಾಸರಗೋಡು ನೆಲ್ಲಿಕುಂಜೆ ಬೀಚ್ , ಕಾಸರಗೋಡು ಬಂದರು ಮಧ್ಯಾಹ್ನ ಅಜನೂರು ಬಂದರಿಗೆ ಸಚಿವರು ಭೇಟಿ ನೀಡುವರು