ಕೋಟ, ಜು 24 (DaijiworldNews/MS): ಉಪ್ಪಿನಕೋಟೆಯ ಕುಮ್ರಗೋಡಿನ ಪ್ಲ್ಯಾಟ್ ನಲ್ಲಿ ನಡೆದ ವಿಶಾಲಾ ಗಾಣಿಗ ಕೊಲೆ ಪ್ರಕರಣದ ಆರೋಪಿ ರಾಮಕೃಷ್ಣ ಗಾಣಿಗನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿದ್ದು ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.
ತನಿಖಾಧಿಕಾರಿ ಬ್ರಹ್ಮಾವರ ಸಿ.ಪಿ.ಐ ಅನಂತಪದ್ಮನಾಭ ಮತ್ತು ತಂಡ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಮುಂಬೈಯಲ್ಲಿ ಅಭರಣ ಮಾರಾಟ?
ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಇದೀಗ ತನಿಖಾ ತಂಡ ಮುಂಬೈನಲ್ಲಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಹಾಗೂ ಕೊಲೆಯ ಸಂದರ್ಭ ವಿಶಾಲಾ ಧರಿಸಿದ್ದ ಸುಮಾರು 2 ಲಕ್ಷ ರೂ ಮೌಲ್ಯದ 50 ಗ್ರಾಂ ತೂಕದ ಚಿನ್ನಾಭರಣವನ್ನು ಆರೋಪಿ ಮುಂಬೈಯಲ್ಲಿ ಮಾರಾಟ ಮಾಡಿದ್ದು ಇದನ್ನು ಕೂಡಾ ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದ್ದು, ಇನ್ನು ಒಂದೆರಡು ದಿನಗಳಲ್ಲಿ ಆರೋಪಿಯನ್ನು ಉಡುಪಿಗೆ ಕರೆತರುವ ಸಾಧ್ಯತೆ ಇದೆ.