ಕಾಸರಗೋಡು, ಜು.23 (DaijiworldNews/HR): ನವ ವಿವಾಹಿತೆಯೋರ್ವಳು ಪತಿ ಮನೆಯ ಸ್ನಾನ ಗ್ರಹದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಿದೂರಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಿದೂರು ಮೈರಾಳದ ಉದಯಕುಮಾರ್ ಅವರ್ ಪತ್ನಿ ಶ್ರೇಯ (22) ಎಂದು ಗುರುತಿಸಲಾಗಿದೆ.
ಆರು ತಿಂಗಳ ಹಿಂದೆ ಇವರ ವಿವಾಹ ನಡೆದಿತ್ತು. ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ಹೇಳಿ ತೆರಳಿದ್ದ ಈಕೆ ಹಲವು ಸಮಯ ಕಳೆದರೂ ಬಾರದೆ ಇದ್ದಾಗ ಬಾಗಿಲು ಬಡಿದು ತೆರೆಯದಿದ್ದಾಗ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು.