ಕಾರ್ಕಳ, ಜು.23 (DaijiworldNews/HR): ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಕಾರ್ಕಳ ಕ್ಷೇತ್ರದ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ಮಕ್ಕಳ ಆನ್ಲೈನ್ ತರಗತಿಗಳಿಗೆ, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರ ಸಂಪರ್ಕಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿಪಡಿಸುವವಂತೆ ಶಾಸಕ ವಿ ಸುನಿಲ್ ಕುಮಾರ್ ಸೂಚಿಸಿದರು.
ವಿಕಾಸ ಕಛೇರಿಯಲ್ಲಿ ಮೊಬೈಲ್ ಸೇವಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮೊಬೈಲ್ ಟವರ್ಗಳು ಇಲ್ಲದ ಪ್ರದೇಶಗಳಲ್ಲಿ ಹೊಸ ಮೊಬೈಲ್ ಟವರ್ ಸ್ಥಾಪಿಸುವ ಬಗ್ಗೆ ಮತ್ತು ನೆಟ್ವರ್ಕ್ ಸಿಗ್ನಲ್ ಕಡಿಮೆ ಇರುವ ಪ್ರದೇಶಗಳಲ್ಲಿ ನೆಟ್ವರ್ಕ್ ಉತ್ತಮ ಪಡಿಸುವ ಬಗ್ಗೆ ಆದಷ್ಟೂ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಮೊಬೈಲ್ ಸೇವಾ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟವರ್ಗಳ ನಿರ್ಮಾಣ ವಿಚಾರದಲ್ಲಿ ಮೊಬೈಲ್ ಸೇವಾ ಸಂಸ್ಥೆಯವರಿಗೆ ಇರುವ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಕಾರ್ಕಳ ಶಾಸಕರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.