ಮಂಗಳೂರು, ಜು 23 (DaijiworldNews/MS): ಜಾಗ ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪಟೇಲ್ ಶ್ರೀನಿವಾಸ್ ರಾವ್ ಅವರು ದೂರು ನೀಡಿದ್ದಾರೆ.
ಪಟೇಲ್ ಶ್ರೀನಿವಾಸ್ ರಾವ್ ಅವರಿಗೆ ಕಾಟಿಪಳ್ಳ ಹಾಗೂ ಇಡ್ಯಾ ಗ್ರಾಮಗಳಲ್ಲಿ ಒಟ್ಟು 1.43 ಎಕರೆ ಜಾಗ ಇದು ಹಣದ ಅವಶ್ಯಕತೆ ಇದ್ದುದರಿಂದ ಅದನ್ನು ತುರ್ತಾಗಿ ಮಾರಾಟ ಮಾಡಲು ಬಯಸಿದ್ದರು.ಪರಿಚಿತರಾದ ಇಬ್ಬರಿಗೆ ಈ ವಿಷಯ ತಿಳಿಸಿದಾಗ ಸೆನ್ಸ್ ಗೆ 1.50 ಲಕ್ಷ ರೂಪಾಯಿಯಂತೆ ಒಂದು ಎಕರೆ ಜಾಗ ಖರೀದಿಸುವುದಾಗಿ ಆಶ್ವಾಸನೆ ನೀಡಿದ್ದರು. ಪರಿಚಯ ಇದ್ದ ಕಾರಣ ನಂಬಿ ದಾಖಲೆಗಳಿಗೆ ಸಹಿ ಹಾಕಿ ನೀಡಿದ್ದು 49,80,700 ಪಾವತಿಸಿ ಉಳಿದ ನೀಡದೆ ಸತಾಯಿಸುತ್ತಿದ್ದಾರೆ.
ಇದೀಗ ಸಂಪರ್ಕಕ್ಕೂ ಸಿಗದೇ ಇದ್ದುದರಿಂದ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.