ಮಂಜೇಶ್ವರ, ಜು.22 (DaijiworldNews/HR): ಕೇರಳ ರಾಜ್ಯ ಸಹಕಾರಿ ಇಲಾಖೆಯ ಸಹಕಾರಿ ಸದಸ್ಯರಿಗೆ ಸಾಂತ್ವನ ನಿಧಿಯಿಂದ ಸಂಘದ ರೋಗಿಗಳಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಮಂಜೂರಾದ ಧನ ಸಹಾಯ ವಿತರಣೆಯ ಕಾಸರಗೋಡು ತಾಲೂಕು ಮಟ್ಟದ ಉದ್ಘಾಟನೆ ಸಹಕಾರಿ ಭವನದಲ್ಲಿ ನಡೆಯಿತು.
ಸರ್ಕಲ್ ಸಹಕಾರಿ ಯೂನಿಯನ್ನ ಅಧ್ಯಕ್ಷ ಕೆ.ಆರ್ ಜಯಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಹಕಾರಿ ಸಂಘದ ಜಂಟಿ ನೋಂದಾಣಾಧಿಕಾರಿ ಎ.ರಮಾ ಉದ್ಘಾಟಿಸಿದರು.
ಎಂ.ಆನಂದನ್, ಎ.ಜಯಚಂದ್ರನ್, ಎ.ರವೀಂದ್ರ, ಕೆ.ವಿ ಮನೋಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.