ಉಡುಪಿ, ಜು.22 (DaijiworldNews/HR): ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚೇತರಿಸಿಕೊಂಡು ಶೀಘ್ರ ಗುಣಮುಖರಾಗಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರೆಲ್ಲರು ಸೇರಿ ಉಡುಪಿಯ ಅನಂತೇಶ್ವರ ದೇವಸ್ಥಾನ ಮತ್ತು ರಾಘವೆಂದ್ರ ಮಠದಲ್ಲಿ ವಿಶೇಷ ಪೂಜೆಯನ್ನು ಗುರವಾರದಂದು ಸಲ್ಲಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅಶೋಕ್ಕುಮಾರ್ ಕೊಡವೂರು, "ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆನಾಂರ್ಡಿಸ್ರವರು ನಾವು ಕಂಡ ಗಾಂಧಿ. ತಲೆಗೆ ಏಟು ಬಿದ್ದು ಸ್ಥಿತಿ ಚಿಂತಾಜನಕವಾಗಿದೆ. ಅವರು ಬಾಲ್ಯದಿಂದಲೂ ಸಮಾಜಸೇವೆಯನ್ನು ಮಾಡಿಕೊಂಡು ಬಂದಿದ್ದರು. ಅವರು ನಮಗೆ ಪ್ರೇರಣೆ. ಅಪ್ರತಿಮ ನಾಯಕರು. ಯಾರಿಗೂ ಬೇಧ ಬೇದಭಾವ ಮಾಡದೆ ಪಕ್ಷವನ್ನು ಕಟ್ಟಿದ್ದಾರೆ. ಪರಿಶುದ್ದ ರಾಜಕಾರಣಿ. ಈಗಿನ ಸಮಾಜದಲ್ಲಿ ಅವರ ಉಪಸ್ಥಿತಿಯಿಲ್ಲದೆ ಕಷ್ಟಕರವಾಗಿದೆ. ಸದ್ಯ ಅವರನ್ನು ನೋಡಿ ಬರಲು ಆಗದ ಕಾರಣ ಇಲ್ಲಿಯೇ ಶೀಘ್ರ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಮುಖಂಡರೆಲ್ಲರು ಕೋವಿಡ್ ನಿಯಾಮವಳಿಯನ್ನು ಅನುಸರಿಸಿ ತಮ್ಮತಮ್ಮ ಊರುಗಳಲ್ಲೆ ಪ್ರಾರ್ಥನೆ ಸಲ್ಲಿಸುವಂತೆ ಮನವಿಯನ್ನು ಮಾಡಿದ್ದೇನೆ" ಎಂದರು.
ಆ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಬಿ. ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರುˌಹರೀಶ್ ಕಿಣಿˌಮುರಲಿ ಶೆಟ್ಟಿˌಕುಶಲ ಶೆಟ್ಟಿˌಅಣ್ಣಯ್ಯ ಸೇರಿಗಾರ್ˌಪ್ರಖ್ಯಾತ ಶೆಟ್ಟಿˌ ಸತೀಶ್ ಅಮೀನ್ ಪಡುಕರೆˌಯತೀಶ್ ಕರ್ಕೆರˌರಮೇಶ್ ಕಾಂಚನ್ˌಜನಾರ್ಧನ್ ಭಂಡಾರ್ ಕಾರ್ˌಮಿನಾಕ್ಷಿ ಮಾಧವ ಬನ್ನಂಜೆˌ ಜ್ಯೋತಿ ಹೆಬ್ಬಾರ್ˌ ಹರಿಶ್ ಶೆಟ್ಟಿ ಪಾಂಗಾಳˌ ಸದಾಶಿವ ಕಟ್ಟಗುಡ್ಡೆˌ ಅಮೃತ್ ಶೆಣೈˌ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿˌಗಣೇಶ್ ನೆರ್ಗಿˌ ಸಂಕಪ್ಪ .ಎˌ ಉಪೇಂದ್ರ ಮೆಂಡನ್ˌ ಗಣೇಶ್ ರಾಜ್ ಸರಳಬೆಟ್ಟುˌಕೃಷ್ಣ ಹೆಬ್ಬಾರ್ˌ ಬ್ರಹ್ಮಾವರ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಜಯ ಶೆಟ್ಟಿ ಬನ್ನಂಜೆˌ ಮೀನಾಕ್ಷಿ ಮಾಧವ ಬನ್ನಂಜೆˌ ಬಿ .ಕೆ ರಾಜ್ ಕೆಮ್ಮಣ್ಣು, ಸದಾನಂದ ಪೂಜಾರಿ ಪರ್ಕಳ, ವಾಲ್ಟರ್ ಡಿ ಸೋಜಾ ಕೊಳಲಗಿರಿ, ಸುರೇಶ್ ಶೆರಿಗಾರ ಕಡಿಯಾಳಿ ಉಪಸ್ಥಿತರಿದ್ದರು.