ಕಾಸರಗೋಡು, ಜು.22 (DaijiworldNews/HR): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಪ್ರಕರಣದ ಮೂರನೇ ಆರೋಪಿ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ ಘಟನೆ ಕಣ್ಣೂರು ಸೆಂಟ್ರಲ್ ಜೈಲ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಕೆ.ಎಂ ಸುರೇಶ್ ಹಲ್ಲೆ ಗೊಳಗಾದವನು. ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಎರ್ನಾಕುಲಂನ ಅಝೀಜ್ ಎಂಬಾತ ತಲೆಗೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಸುರೇಶ್ನನ್ನು ಕಣ್ಣೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಯೂರು ಸೆಂಟ್ರಲ್ ಜೈಲ್ನಲ್ಲಿದ್ದ ಸುರೇಶ್ನನ್ನು ಎರಡು ದಿನಗಳ ಹಿಂದೆ ಕಣ್ಣೂರು ಸೆಂಟ್ರಲ್ ಜೈಲ್ಗೆ ಕರೆತರಲಾಗಿತ್ತು. ಬೆಳಿಗ್ಗೆ ವ್ಯಾಯಾಮದ ಸಂದರ್ಭದಲ್ಲಿ ಇಬ್ಬರ ಜೊತೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ.