ಸುಬ್ರಹ್ಮಣ್ಯ, ಜು.22 (DaijiworldNews/HR): ಸುಬ್ರಹ್ಮಣ್ಯದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಉಪಹಾರ ಸೇವಿಸುತ್ತಿದ್ದಾಗ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರ 17 ಲಕ್ಷ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ಕಳವಾದ ಘಟನೆ ನಡೆದಿದೆ.
ಜು.20 ಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮನ ಬೈರಲಿಂಗೇನ ಹಳ್ಳಿಯ ಗಂಗಮ್ಮ ಮತ್ತು ಮನೆಯವರು ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಬಂದಿದ್ದು, ಖಸಗಿ ವಸತಿಗೃಹದಲ್ಲಿ ಉಳಿದು ಮರುದಿನ ಬಳಗ್ಗೆ ರಥಬೀದಿಯ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸುವ ಮಹಿಳೆ ತನ್ನ ಪಕ್ಕದಲ್ಲಿಟ್ಟಿದ್ದ ಬ್ಯಾಗ್ ಅನ್ನು ಯಾರೋ ಟೋಪಿ ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಎಗರಿಸಿದ್ದು, ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಬ್ಯಾಗ್ ನಲ್ಲಿ ಸುಮಾರು 17 ಲಕ್ಷ ಮೌಲ್ಯದ ಚಿನ್ನಾಭರಣ್ನಗಳಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.