ಕಾರ್ಕಳ, ಜು.22 (DaijiworldNews/HR): ಶಿವತಿಕೆರೆ ಶ್ರೀ ಉಮಾಮಹೇಶ್ವರಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿ 2021-22ಮತ್ತು 2022-23ನೇ ಸಾಲಿನ ನೂತನ ಆಡಳಿತ ಮಂಡಳಿಯ ಮೊಕ್ತೇಸರರಾಗಿ ಉದ್ಯಮಿ ಕುಂದಾಪುರ ಸಹನಾ ಸಮೂಹ ಸಂಸ್ಥೆಯ ಮಾಲಕ ಸುರೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಈ ಹಿಂದೆ ಕಾರ್ಯನಿರ್ವಹಿಸಿರುವ ಸುರೇಂದ್ರ ಶೆಟ್ಟಿಯವರ ಅಧಿಕಾರವಧಿಯಲ್ಲಿ ಶ್ರೀ ಕ್ಷೇತ್ರದ ಸರ್ವಾಗೀರ್ಣ ಅಭಿವೃದ್ಧಿಗೆ ಅಭಿವೃದ್ಧಿ ಕಂಡಿತಲ್ಲದೇ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜರಗಿದ್ದವು.
ದೇವಸ್ಥಾನದ ಮೊಕ್ತೇಸರರಾಗಿ ಚಂದ್ರಶೇಖರ ಶೆಟ್ಟಿ, ಕೆ.ಬಿ.ಗುರುಪ್ರಸಾದ್ ರಾವ್, ದಯಾನಂದ ಮೊಯಿಲಿ, ಸಂಜೀವ ದೇವಾಡಿಗ, ಸುಧಾಕರ ಶೆಟ್ಟಿ, ಸಂದೇಶ್ ರಾವ್, ಗೌರವಧ್ಯಕ್ಷರಾಗಿ ಸುಂದರ ದೇವಾಡಿಗ ಆಯ್ಕೆಗೊಂಡಿದ್ದಾರೆ.