ಕಾರ್ಕಳ, ಜು 22 (DaijiworldNews/MS): ಇಲ್ಲಿನ ದುರ್ಗಾ ತೆಳ್ಳಾರು ಎಂಬಲ್ಲಿ ಅಕ್ರಮ ಕಸಾಯಿಖಾನೆಯ ವಿರುದ್ಧ ಕಾರ್ಕಳ ನಗರ ಹಾಗೂ ಗ್ರಾಮಾಂತರ ಠಾಣಾಧಿಕಾರಿ ಕಾರ್ಯಾಚರಣೆ ನಡೆಸಿದ್ದಾರೆ.ಘಟನಾ ಸ್ಥಳದಲ್ಲಿ ಸುಮಾರು 50 ಕೆಜಿ ದನದ ಮಾಂಸ ಹಾಗೂ ವಧೆಗೆ ಬಳಸಲಾಗಿದ್ದ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳೆದ ಕೆಲವು ವರ್ಷಗಳಿಂದ ಇದೇ ಜಾಗದಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಆರೋಪಿತರು ತಮ್ಮ ಕೃತ್ಯಗಳನ್ನು ನಾಶಪಡಿಸುವ ದುರುದ್ದೇಶದಿಂದ ಹೊಂಡಗಳನ್ನು ತೆಗೆದು ಅದರೊಳಗೆ ವಧಿಸಲಾಗುವ ದನಗಳ ತ್ಯಾಜ್ಯಗಳನ್ನು ಹಾಕುತ್ತಿದ್ದರು. ಆ ಮೂಲಕ ಸಾಕ್ಷಾಧಾರಗಳನ್ನು ನಾಶಪಡಿಸುತ್ತಿದ್ದರು ಎಂಬ ಅಂಶವನ್ನು ಪೋಲಿಸರು ಬಯಲುಗೊಳಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.