ಮಂಗಳೂರು, ಜು 22 (DaijiworldNews/MS): ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಇದರ ಪರಿಣಾಮ ಶಿರಾಡಿ ಘಾಟ್ ನ ಮಾರ್ನಳ್ಳಿ ಬಳಿ ಭೂ ಕುಸಿತ ಉಂಟಾಗಿದ್ದು ರಸ್ತೆ ಸಂಪೂರ್ಣ ಬಿರುಕುಬಿಟ್ಟಿದೆ.
ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಗಳೂರು-ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯ ಒಂದು ಬದಿಯ ಮಣ್ಣು ಸಂಪೂರ್ಣ ಕುಸಿದಿದ್ದು, ಇದರ ಪರಿಣಾಮ ರಸ್ತೆ ಬಿರುಕುಬಿಟ್ಟಿದೆ. ಹೀಗಾಗಿ ಘನ ವಾಹನಗಳು ಸಂಚಾರ ತೀರಾ ಅಪಾಯಕಾರಿಯಾಗಿದ್ದು , ಬದಲಿ ಮಾರ್ಗ ಅನುಸರಿಸುವುದು ಸೂಕ್ತವಾಗಿದೆ.
ಈಗಾಗಲೇ ಘನ ವಾಹನಗಳಿಗೆ ಚಾರ್ಮಾಡಿ ಹಾಗೂ ಮಡಿಕೇರಿ ರಸ್ತೆಯಲ್ಲಿ ಹೋಗುವುದು ಕಷ್ಟವಾಗಿದ್ದು ಶಿರಾಡಿ ಘಾಟ್ ನ ರಸ್ತೆಯೂ ಬಿರುಕುಬಿಟ್ಟ ಪರಿಣಾಮ ಸರಕು ಸಾಗಾಣೆಗೆ ತೊಡಕುಂಟಾಗಲಿದೆ.