ಉಡುಪಿ, ಜು 22 (DaijiworldNews/MS): ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಗೊಂಡಿದ್ದ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳ ಅವರ ವಿರುದ್ಧದ ಆರೋಪಗಳು ನಿರಾಧಾರವಾಗಿದೆ ಎಂದು ಕೆಎಟಿ ತೀರ್ಪು ನೀಡಿದೆ. ಈ ಮೂಲಕ ಅನ್ಯಾಯದ ವಿರುದ್ಧದ ಹೋರಾಟ ದಲ್ಲಿ ಕೆ.ಮಂಜುಳ ಅವರಿಗೆ ನ್ಯಾಯ ಸಿಕ್ಕಂತಾಗಿದೆ. ಕರ್ನಾಟಕ ರಾಜ್ಯ ಆಡಳಿತ ಮಂಡಳಿ (ಕೆಎಟಿ) ಯೂ ಕೆ.ಮಂಜುಳ ಅವರನ್ನು ಮರು ನಿಯುಕ್ತಿಗೊಳಿಸುವಂತೆ ಸರ್ಕಾರಕ್ಕೆ ಹೇಳಿದೆ.
ಶಿಕ್ಷಣ ಇಲಾಖೆಯಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಂಜುಳಾ 2 ವರ್ಷ 2ತಿಂಗಳು ಉಡುಪಿ ಬಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ವಿರುದ್ದ ಆಶೋಕ್ ಕೊರಂಗ್ರಪಾಡಿ ಬಿದ್ಕಲ್ ಕಟ್ಟೆ ಎನ್ನುವವರ ಹೆಸರಿನಲ್ಲಿ ಮಂಜುಳಾ ವಿರುದ್ದ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ವಿಚಾರವಾಗಿ ಕೆ.ಮಂಜುಳ ಅವರ ಪರ ವಕೀಲರು ಮತ್ತು ಸರಕಾರದ ಪರ ವಕೀಲರ ವಾದ ಮಂಡನೆ ನಡೆದಿದ್ದು, ಒಂದೆಡೆ ಈ ವಿಚಾರದ ವಾದ ಮಂಡನೆ ವೇಳೆ ಸರಕಾರಿ ಪರ ವಕೀಲರು ಕೆ.ಮಂಜುಳ ಅವರ ವಿರುದ್ಧ ಮಾಡಲಾದ ಆರೋಪಗಳಿಗೆ ಸೂಕ್ತವಾದ ದಾಖಲೆ ಆಧಾರಗಳನ್ನು ಒದಗಿಸಿರಲಿಲ್ಲ. ಮತ್ತೊಂದೆಡೆ ಕೆ.ಮಂಜುಳ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸುವ ಎಲ್ಲಾ ಸಾಕ್ಷ್ಯಾದಾರಗಳನ್ನು ಅವರ ಪರ ವಕೀಲರು ಸಲ್ಲಿಸಿದ ಹಿನ್ನೆಲೆ ಕೆಎಟಿಯು ಕೆ. ಮಂಜುಳಾ ಅವರ ಪರವಾಗಿ ತೀರ್ಪು ನೀಡಿ ಅವರನ್ನು ಅಮಾನತುಗೊಳಿಸಲಾದ ಆದೇಶ ರದ್ದುಪಡಿಸಿದೆ.
ಈ ಮೂಲಕ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯಿಸಿದಂತೆ ಮಾಡಲಾದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನುಒದಗಿಸುವಲ್ಲಿ ಇಲಾಖೆ ವಿಘಲವಾಗಿರುತ್ತದೆ. ಆದ್ದರಿಂದ ಕೆ.ಮಂಜುಳ ಅವರ ವಿರುದ್ಧ ಮಾಡಿರುವ ಯಾವುದೇ ಆರೋಪಗಳುಸಾಬೀತಾಗಿಲ್ಲ. ಅವರ ಮೇಲೆ ಹೊರಿಸಲಾಗಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ. ವಿನಾ ಕಾರಣ ಅವರ ಮೇಲೆ ಸುಳ್ಳು,ಆರೋಪ ಹೊರಿಸಿರುವುದು ತಿಳಿದು ಬಂದಿದ್ದು ಅವರನ್ನು ಮತ್ತೆ ಅದೇಸ್ಥಾನಕ್ಕೆ ಮರು ನೇಮಕ ಮಾಡುವಂತೆ ಆದೇಶ ನೀಡಿದೆ.