ಕೋಟ, ಜು 20 (DaijiworldNews/MS): ಕೋಟತಟ್ಟು ಗ್ರಾಮಪಂಚಾಯತ್ ನ ಪಡುಕರೆ ಯಿಂದ ಕೋಡಿ ಕನ್ಯಾಣದವೆರೆಗಿನ ಕರಾವಳಿ ರಸ್ತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಫಾರಸ್ಸಿನ ಮೇರೆಗೆ ಆಗಿನ ಮೀನುಗಾರಿಕಾ ಸಚಿವ ಪ್ರಸ್ತುವ ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಮಾರು 7 ಕೋಟಿ ರೂ ಬಿಡುಗಡೆಗೊಳಿಸಿದ್ದು ಸುಮಾರು 5 ಕಿಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ಮಂಗಳವಾರದಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಪಡುಕರೆಯಿಂದ ಕೋಡಿ ಕನ್ಯಾಣದವರೆಗೆ ಪಾದಯಾತ್ರೆಮೂಲಕ ಸಂಚರಿಸಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಆಯಾ ಭಾಗಗಳಲ್ಲಿ ಅಲ್ಲಿನ ಸ್ಥಳೀಯರು ಸಚಿವರಿಗೆ ಪುಷ್ಭಗುಚ್ಛ ನೀಡಿ ಹಾರಹಾಕಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ಮೀನುಗಾರರ ಸಮಸ್ಯೆಗೆ ಶಕ್ತಿ ಮೀರಿ ಸಹಾಯ:
ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮಿತ್ರರ ವಾಸ್ತವಿಕತೆಯತೆ ಮರೆಮಾಚಬಾರದು. ಬಿಜೆಪಿ ಸರ್ಕಾರ ಮೀನುಗಾರರ ಎಲ್ಲಾ ಸವಲತ್ತುಗಳ ಬಗ್ಗೆ ಶಕ್ತಿ ಮೀರಿ ಸಹಕಾರ ಕೊಟ್ಟಿದೆ. ಸಹಾಯ ಮಾಡಿದೆ. ನಾನು ಮೀನುಗಾರಿಕಾ ಸಚಿವರಾಗಿದ್ದ ವೇಳೆ ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರಿಗಾಗಿ, ಕೋವಿಡ್ ಸಂದರ್ಭದಲ್ಲೂ 181 ಕೋ.ರೂ. ಬಿಡುಗಡೆ ಮಾಡಿ, ಟೆಂಡರ್ ಮಾಡಿ, ಮುಖ್ಯಮಂತ್ರಿಗಳೇ ಶಿಲಾನ್ಯಾಸ ಮಾಡಿದ್ದಾರೆ. ಇದು ಐತಿಹಾಸಿಕ ವಿಚಾರ. ಕೋಡಿ ಕನ್ಯಾಣದಲ್ಲಿರುವ ಜಟ್ಟಿ, ಹೂಳೆತ್ತುವ ಕಾಮಗಾರಿ ಸಿ ಆರ್ ಝಡ್ ಹಾಗೂ ಹಸಿರು ಪೀಠದ ಸಮಸ್ಯೆಯಿಂದಾಗಿ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ನಾನು, ಸಚಿವ ಅಂಗಾರ ಅವರು ಸೇರಿ ಅದರ ಹೂಳೆತ್ತುವ ಬಗ್ಗೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಪ್ರಥಮ ಹಂತದಲ್ಲೇ ಶಾಸಕರ ವಿನಂತಿ ಮೇರೆಗೆ 23,000 ಜನರಿಗೆ 60 ಕೋ. ಮಹಿಳಾ ಮೀನುಗಾರರ ಸಾಲಮನ್ನಾ ಮಾಡಿದ್ದಾರೆ. 22,000 ಜನರಿಗೆ ಈಗಾಗಲೇ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಒಂದೆರಡು ಸಾವಿರ ಮಂದಿಗೆ ಹೆಚ್ಚು ಕಡಿಮೆಯಾಗಿರಬಹುದು. ಅದನ್ನು ಪರಿಶೀಲಿಸಿ ಕೊಡುವ ಕೆಲಸವನ್ನು ಮಾಡುತ್ತೇವೆ. ಬಹಳ ವರ್ಷಗಳಿಂದ ಉಳಿತಾಯ ಪರಿಹಾರ ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಆ ಪರಿಹಾರ ಕೊಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಬೋಟ್ ಆಂಬುಲೆನ್ಸ್ ಮಾಡುವ ಬಗೆಗೂ ಪ್ರಸ್ತಾಪನೆ ನೀಡುತ್ತೇವೆ. ಮೀನುಗಾರರ ಪರವಾಗಿ ನಮ್ಮ ಸರ್ಕಾರ ಶಕ್ತಿ ಮೀರಿ ಕೆಲಸಗಳನ್ನು ಮಾಡುತ್ತಿದೆ ಎಂದರು.
ಬೈಂದೂರು ಕ್ಷೇತ್ರದಲ್ಲಿ ಹೆಚ್ಚು ಕಾಮಗಾರಿ :
ಅಂಗಾರ ಅವರು ಮೀನುಗಾರಿಕಾ ಸಚಿವರಾದ ಮೇಲೆ ಉಡುಪಿ ಮತ್ತು ಮಂಗಳೂರಿನಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಅದಕ್ಕೆ ಬೇಕಾದ ಯೋಜನೆ, ಯೋಚನೆಯನ್ನು ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಉಳ್ಳಾಲದಿಂದ ಆರಂಭಿಸಿ ಬೈಂದೂರು ಒತ್ತಿನೆಣೆ ವರೆಗೆ ಹೆಚ್ಚು ಕಾಮಗಾರಿಗಳಾಗಿದ್ದಿದ್ದರೆ ಅದು ಬೈಂದೂರು ಕ್ಷೇತ್ರದಲ್ಲಿ. ಸಂಸದ ರಾಘವೇಂದ್ರ ಅವರು ಕ್ಷೇತ್ರದ ಪ್ರತಿನಿಧಿಯಾಗಿರುವುರಿಂದ ಹೆಚ್ಚು ಅನುಕೂಲಗಳಾಗಿವೆ. ಶಾಸಕರು, ಸಂಸದರ ಪರಿಶ್ರಮದಿಂದ ಹೆಚ್ಚು ಅನುದಾನಗಳು ಬಂದಿದೆ. ಕಾಮಗಾರಿ ಕಳಪೆಯಾಗಿರುವ ಬಗ್ಗೆ ಯೋಚಿಸಿ, ಸಚಿವ ಅಂಗಾರ ಅವರ ಗಮನಕ್ಕೆ ತರಲಾಗುವುದು ಎಂದರು.
ರಸ್ತೆ ಕಾಮಗಾರಿ ಬಗ್ಗೆ ವ್ಯಾಪಕ ಪ್ರಶಂಸೆ:
ಸುಮಾರು 5 ಕಿ.ಮೀ ದೂರ 6 ಮೀಟರ್ ವಿಸ್ತೀರ್ಣದ ರಸ್ತೆ ಕಾಮಗಾರಿ ನಿರ್ಮಿತಿಕೇಂದ್ರದ ವತಿಯಿಂದ ನಡೆದರೂ ಸ್ಥಳೀಯ ಮುಖಂಡ ಐರೋಡಿ ವಿಠ್ಠಲ್ ಪೂಜಾರಿಯವರ ವಿಶೇಷ ಕಾಳಜಿ ಮೂಲಕ ರಸ್ತೆಕಾಮಗಾರಿಯ ಯಶಸ್ವಿಯಾಗಿ ಪೂರೈಸಿ ಹೆಗ್ಗಳಿಕೆ ಇವರದ್ದಾಗಿದೆ ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಇಷ್ಟು ದೊಡ್ಡ ಕಾಮಗಾರಿಯನ್ನು ತನ್ನ ವಿಶೇಷ ಮುತುವರ್ಜಿಯಲ್ಲಿ ನಡೆಸಿಕೊಟ್ಟ ಬಗ್ಗೆ ಕೋಡಿ ಚಂದ್ರಶೇಖರ್ ನಾವಡ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಅಶ್ವಿನಿ ದಿನೇಶ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸದಸ್ಯೆ ರೇಖಾ ಕೇಶವ ಕರ್ಕೇರ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ ಮೆಂಡನ್, ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಪ್ರಕಾಶ್ ಹಂದಟ್ಟು ಸತೀಶ್ ಕುಂದರ್, ಪೂಜಾ ಪೂಜಾರಿ ಹಂದಟ್ಟು,ವಿದ್ಯಾ ಸಾಲಿಯಾನ್, ಸಾಹೀರಾಬಾನು,ರಾಬರ್ಟ್ ನಾಯ್ಕ್, ಜ್ಯೋತಿ, ಸೀತಾ, ಪ್ರಮೋದ್ ಹಂದೆ, ಬೈಂದೂರು ಮಾಜಿ ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಡುಪಿಯ ಎ.ಪಿ ಎಮ್ ಸಿ ಉಪಾಧ್ಯಕ್ಷ ಕೃಷ್ಣ ಪೂಜಾರಿ
ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಕೋಟತಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ರಘು ತಿಂಗಳಾಯ, ಬಿಜೆಪಿ ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಸ್ಥಳೀಯ ಮುಖಂಡರಾದ ಕೇಶವ ಕರ್ಕೇರ, ಶಿವಮೂರ್ತಿ ಕೆ,ಶ್ರೀನಿವಾಸ್ ಪೂಜಾರಿ ,ನಾಗೇಶ್ ಪೂಜಾರಿ, ಸತೀಶ ತೋಳಾರ್,ರಾಮಬಂಗೇರ, ಸುರೇಂದ್ರ ಕೋಡಿ,ಜಗನಾಥ್ ಅಮೀನ್,ಉದಯ್ ತಿಂಗಳಾಯ,ಚಂದ್ರ ಪುತ್ರನ್,ಉದಯ್ ತಿಂಗಳಾಯ ಪಡುಕರೆ,ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.