ಉಡುಪಿ,ಜು.19 (DaijiworldNews/HR): "ಸಚಿವ ಸಂಪುಟ ವಿಸ್ತರಣೆಯ ಸದ್ಯದ ಅವಧಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿ ನಾನಿಲ್ಲ. ವಿಸ್ತರಣೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ" ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿ ನಾನಿಲ್ಲ, ಹಾಲಾಡಿಯವರಿಗೆ ಮತ್ತು ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುವುದು ನನ್ನ ಹಾರೈಕೆ, ನನಗೆ ಶಾಸಕನಾಗಿ ಕೆಲಸ ಮಾಡಲು ಇದ್ದ 18 ಗಂಟೆ ಸಾಕಾಗುತಿಲ್ಲ. ಮಂತ್ರಿಯಾದರೆ ಅವರಿಗೆ ಸ್ವಂತ ಕ್ಷೇತ್ರದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಾರೆ" ಎಂದರು.
ಇನ್ನು ಹಾಲಾಡಿ ಅವರು ಹಿರಿಯ ರಾಜಕಾರಣಿ, ಸುನಿಲ್ ಅವರಿಗು ನಾಯಕತ್ವದ ಗುಣ ಇದೆ ಹಾಗಾಗಿ ಅವರಿಗೆ ಕೊಟ್ಟರೆ ನನಗೆ ಸಂತೊಷವಾಗುತ್ತದೆ" ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಆ ಆಡಿಯೋ ನನ್ನದಲ್ಲ ಎಂದು ರಾಜ್ಯಾಧ್ಯಕ್ಷ್ಯರು ಸ್ವಷ್ಟವಾಗಿ ಹೇಳಿದ್ದು, ತನಿಖೆಯಾದ ಬಳಿಕ ಸತ್ಯಾಂದ ಹೊರಬರಲಿದೆ. ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಪಕ್ಷದ ಪ್ರಮುಖ ನಾಯಕರೇ ಇಬ್ಬರೂ ರಾಜ್ಯಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಹಾಗಾಗಿ ಅವರ ಹೆಸರು ಬಂದಿರುವುದರಿಂದ ಅದು ಸುಳ್ಳು ಎಂದು ಸಾಬೀತಾದಂತೆ" ಎಂದರು.
ಇನ್ನು "ಶಾಸಕಾಂಗ ಸಭೆಯ ಬಗ್ಗೆ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ನಾನು ಕೂಡಾ ಒತ್ತಾಯ ಮಾಡುತ್ತೇನೆ. ಪಕ್ಷದ ಮತ್ತು ರಾಜ್ಯದ ಅಭಿವೃದ್ದಿಗೆ ಶಾಸಕಾಂಗ ಸಭೆ ನಡೆಯಬೇಕು" ಎಂದು ಹೇಳಿದ್ದಾರೆ.