ಬ್ರಹ್ಮಾವರ, ಜು 19 (DaijiworldNews/MS): ಬ್ರಹ್ಮಾವರ ಸಮೀಪದ ಉಪ್ಪಿನಕೋಟಿಯ ಬಳಿ ಇರುವ ಮಿಲನ ರೆಸಿಡೆನ್ಸಿಯಲ್ಲಿ ಸಂಭವಿಸಿದ ವಿಶಾಲ ಗಾಣಿಗ ಎನ್ನುವ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳ್ಳುತ್ತಿದೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಬೆಂಗಳೂರಿಗೆ ತೆರಳಿದ್ದ ಪೊಲೀಸರ ತಂಡ ಇನ್ನಷ್ಟು ಜಾಡುಹಿಡಿದು ಕೇರಳಕ್ಕೆ ತೆರಳಿದೆ.
ವಿಶಾಲ ಅವರ ಮೊಬೈಲ್ ನಲ್ಲಿ ಪರಿಚಯಸ್ಥರ ಮೂರ್ನಾಲ್ಕು ಕಾಲ್ ಮೆಸೇಜ್ ಹೊರತುಪಡಿಸಿ ಇತರ ಯಾವುದೇ ಕರೆ ಬಂದಿರುವುದು ರೀತಿಯಲ್ಲಿ ಕಂಡು ಬಂದಿರಲಿಲ್ಲ.ಕೆಲವು ಆತ್ಮೀಯರು ವಿಶಾಲಾ ಅವರನ್ನು ಸಂಪರ್ಕಿಸಲು ಇಂಟರ್ನೆಟ್ ಕಾಲ್ ಮೆಸೆಂಜರ್ ಕಾಲ್ ಬಳಸುತ್ತಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆಗಾರನ ಸುಳಿವು ಕೇರಳದಲ್ಲಿ ತನಿಖಾ ತಂಡಕ್ಕೆ ಸಿಕ್ಕಿದೆ. ಜಾಡು ಹಿಡಿದು ಬೆಂಗಳೂರಿಗೆ ತೆರಳಿದ್ದ ತನಿಖಾ ತಂಡ ಕೇರಳದಲ್ಲಿ ಬೀಡುಬಿಟ್ಟಿದೆ ಎಂದು ತಿಳಿದುಬಂದಿದೆ ಶೀಘ್ರವೇ ಆಗುವುದು ಖಚಿತ ಎಂದು ಪೊಲೀಸ್ ಇಲಾಖೆ ಭರವಸೆಯಲ್ಲಿದೆ ಎಂದು ತಿಳಿದುಬಂದಿದೆ.