ಬಂಟ್ವಾಳ, ಜು. 18 (DaijiworldNews/SM): ಎಡೆಬಿಡದೆ ಸುರಿದ ಮಳೆಗೆ ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಅಪಾರ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗಾಳಿ ಮಳೆಗೆ ಮನೆ, ಗುಡ್ಡಕುಸಿತ, ಶಾಲಾ ಕಾಂಪೌಂಡ್ ಗೋಡೆ ಕುಸಿತ ಸೇರಿದಂತೆ ಹಲವೆಡೆ ಕೃಷಿಗೆ ಹಾನಿಯಾಗಿದೆ. ಸಜೀಪ ಮೂಡ ಗ್ರಾಮದ ನಗ್ರಿ ಕೂಸಪ್ಪ ನಾಯ್ಕ ಇವರ ಮನೆ ಸಮೀಪದಲ್ಲಿ ಗುಡ್ಡ ಕುಸಿತ ದಿಂದಾಗಿ ಅಡಿಕೆ ಹಾಗೂ ತೆಂಗು ಕೃಷಿಗೆ ಹಾನಿಯಾಗಿದ್ದು, ಸುಮಾರು 100 ಅಡಿಕೆ ಮರ ಹಾಗೂ 15 ತೆಂಗಿನ ಮರಗಳು ಮಣ್ಣು ಪಾಲು ಆಗಿದೆ. ಸುರಕ್ಷಿತ ದೃಷ್ಟಿಯಿಂದ ಈಗಾಗಲೇ ಮನೆಯವರನ್ನು ಸ್ಥಳಾಂತರಿಸಲಾಗಿದೆ.
ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ನೇಮಕ್ಕುರವರ ವಾಸದ ಮನೆಯ ಹಿಂಬದಿಯಲ್ಲಿ ಜರಿದು ಬಿದ್ದಿದೆ. ಅಬ್ದುಲ್ ಖಾದ್ರಿರವರ ಮನೆಯ ಕಾಂಪೌಂಡ್ ಕುಸಿದು ನಷ್ಟಸಂಭವಿಸಿದೆ ಹಾಗೂ ಗುಂಡಿಮಜಲು ಎಂಬಲ್ಲಿ ಚೆನ್ನಪ್ಪ ಪೂಜಾರಿ ಎಂಬವರ ಮನೆಯ ಹಿಂಭಾಗದ ತೊಡಿನ ತಡೆಗೋಡೆ ಕುಸಿದು ಬಿದ್ದಿದೆ. ಬಂಟ್ವಾಳ ಕಸಬಾ ಗ್ರಾಮ ದ ಮಣಿ ಎಂಬಲ್ಲಿ ಬಾಲ ಕೃಷ್ಣ ಗೌಡ ಬಿನ್ ಸಂಜೀವ ಗೌಡ ಆವರಣ ಗೋಡೆ ಕುಸಿದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಂಟ್ವಾಳ ಕಸಬಾ ಗ್ರಾಮದ ಮುಗ್ನಲ್ ಗುಡ್ಡೆ ಎಂಬಲ್ಲಿ ಶಕುಂತಲಾ ರವರ ಮನೆ ಕುಸಿದು ಪೂರ್ಣ ಹಾನಿಯಾಗಿದೆ.