ಮಂಗಳೂರು, ಜು. 18 (DaijiworldNews/SM): ಬಕ್ರೀದ್ ಹಬ್ಬಕ್ಕೆ ದ.ಕ. ಜಿಲ್ಲಾಡಳಿತದಿಂದ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದೆ. ಅದರಂತೆ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ ಎಂದು ಘೊಷಿಸಿದೆ.
ಮಸೀದಿಗಳಲ್ಲಿ 50 ಜನರ ಮಿತಿಯಲ್ಲಿ ಪ್ರಾರ್ಥನೆಗೆ ಅನುಮತಿ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನವರು ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ನಮಾಜ್ ಸಂದರ್ಭ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ತಮ್ಮ ಮನೆಗಳಿಂದಲೇ ಮುಸಲ್ಲಾಗಳನ್ನು ತರಬೇಕು ಎಂದು ಕೂಡ ಸೂಚಿಸಲಾಗಿದೆ. ಹಸ್ತಲಾಘವ, ಆಲಿಂಗನ ಮಾಡದಿರುವಂತೆ ಮನವಿ ಮಾಡಲಾಗಿದೆ.
ಇನ್ನು ರಸ್ತೆ, ಪಾದಚಾರಿ ಮಾರ್ಗ ಸಮೀಪ, ಆಸ್ಪತ್ರೆ, ಸೇರಿದಂತೆ ಆರೋಗ್ಯ ಕ್ಷೇತ್ರಗಳಿರುವ ಪ್ರದೇಶಗಳಲ್ಲಿ, ಮಸೀದಿಗಳ ಆವರಣ, ಇತರ ಧಾರ್ಮಿಕ ಕೇಂದ್ರಗಳ ಆವರಣ, ಶಾಲೆಯ ಆವರಣ, ಆಟದ ಮೈದಾನ, ಉದ್ಯಾನವನಗಳಲ್ಲೂ ಪ್ರಾಣಿ ವಧೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.