ಕಾರ್ಕಳ, ಜು.18 (DaijiworldNews/HR): ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರ ಕಷ್ಟಕ್ಕೆ ಸರಕಾರ ಸ್ಪಂದಿಸಿದ್ದು, ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಮತ್ತು ಸಣ್ಣ ಉದ್ಯಮದಾರರಿಗೆ ನೇರವಾಗಿ ಅಕೌಂಟಿಗೆ ಹಣ ಹಾಕುವುದರ ಮೂಲಕ ಪರಿಹಾರವನ್ನು ಘೋಷಣೆ ಮಾಡಿದ್ದು, ಸರಕಾರದ ಸವಲತ್ತಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಂತಹ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು. ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಾವಣೆ ಮಾಡಿಕೊಂಡು ಸರಕಾರದ ವಿವಿಧ ಸವಲತ್ತನ್ನು ಪಡೆಯಬೇಕು" ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸಾಣೂರು ಗ್ರಾಮ ಪಂಚಾಯತಿನ ಸುವರ್ಣ ಗ್ರಾಮೋದಯ ಸೌಧದಲ್ಲಿ ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ವತಿಯಿಂದ ನೊಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಶ್ರಮಿಕ ಬದುಕಿಗೆ ನೆರವಿನ ಆಸರೆ ಆಹಾರ ಕಿಟ್ ವಿತರಿಸಿ ಮಾತನಾಡಿನಾಡಿದ್ದಾರೆ.
ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಎಪಿಎಂಸಿ ಸದಸ್ಯ ದೇವಾನಂದ ಶೆಟ್ಟಿ, ಕಾರ್ಮಿಕ ಇಲಾಖೆ ಅಧಿಕಾರಿ ಪ್ರಸನ್ನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ, ಸದಸ್ಯರಾದ ಯುವರಾಜ್ ಜೈನ್, ಕರುಣಾಕರ ಎಸ್ ಕೋಟ್ಯಾನ್, ಸರಸ್ವತಿ, ಪ್ರಮೀಳಾ, ಯಶೋಧ ವಿ ಶೆಟ್ಟಿ, ಸುನಂದ ನಾಯ್ಕ್, ಸತೀಶ್ ಪೂಜಾರಿ, ಸುಮತಿ, ಪ್ರಕಾಶ್ ರಾವ್, ಮಂಜುನಾಥ್ ಶೆಟ್ಟಿ, ವಸಂತ ಪೂಜಾರಿ, ಸುಭಾಷ್ ಪೂಜಾರಿ, ರಮೇಶ್, ಸಿಬ್ಬಂದಿ ಮಂಜುನಾಥ ಸಾಣೂರು ಯುವಕ ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ರಾಜೇಶ್ ಪೂಜಾರಿ,ಗ್ರಂಥಪಾಲಕಿ ಜ್ಯೋತಿ ಭಂಡಾರ್ಕರ್, ಕರಿಬಸವೇಶ್ವರಿ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.