ಕಾಸರಗೋಡು, ಜು 18 (DaijiworldNews/PY): ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಹೊಸದಾಗಿ ಆರಂಭಿಸಲಾಗುವ ಪ್ರವಾಸೋದ್ಯಮ ಯೋಜನೆಗಳ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರ್ ಕೋವಿಲ್ ಅಧ್ಯಕ್ಷತೆಯಲ್ಲಿ ಅವಲೋಕನಾ ಸಭೆ ನಡೆಯಿತು.
ಇದರಂತೆ ಅತೀ ಉದ್ದ ನದಿಯಾಗಿರುವ ಚಂದ್ರಗಿರಿ ಆಳಿವೆ, ತೀರ ಪ್ರದೇಶಗಳನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮ ಇಲಾಖೆ 10.74 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೊಳಿಸಲಿದೆ. ತಳಂಗರೆಯಲ್ಲಿ ಬಂದರು ಇಲಾಖೆ ವತಿಯಿಂದ ಪರಂಪರಾಗತ ಪ್ರವಾಸೋದ್ಯಮ ಪಾರ್ಕ್ ನಿರ್ಮಿಸಲು ತೀರ್ಮಾನಿಸಲಾಗಿದೆ.
ಕಾಸರಗೋಡಿನ ಪ್ರಮುಖ ವ್ಯಾಪಾರ ತಳಂಗರೆ ಇತಿಹಾಸ ಸಾರುವ ಹಡಗಿನ ಪ್ರವೇಶ ದ್ವಾರದ ಮಾದರಿಯಲ್ಲಿ ಮೆಮೋರಿಯಲ್ ಗಾರ್ಡ್ ಹಾಗೂ ಹಳೇ ಬಂದರಿನ ಅಂಗವಾಗಿದ್ದ ಸೇತುವೆ ಮತ್ತು ಕಟ್ಟಡದವನ್ನು ನವೀಕರಿಸಿ ಅದನ್ನು ಪ್ರಧಾನ ಆಕರ್ಷಣಾ ಕೇಂದ್ರವನ್ನಾಗಿಸಲಾಗುವುದು. ಇದರ ಜೊತೆಗೆ ಜಲ ವಿನೋದ ಕ್ರೀಡಾ ಸೌಕರ್ಯಕ್ಕಾಗಿ ಬೋಟಿಂಗ್, ಕಿಯೋಕ್ಸ್ಗಳು, ಪೆವಲಿನ್, ಮೈದಾನ, ನಡೆ ಹಾದಿ, ಪಾರ್ಕಿಗ್ ಏರಿಯಾ ಸೌಕರ್ಯಗಳೂ ಈ ಯೋಜನೆಯಲ್ಲಿ ಒಳವಡಿಸಲಾಗಿದೆ.
ಪ್ರಸ್ತುತ ಯೋಜನೆ ಸಾಕ್ಷಾತ್ಕಾರಗೊಳ್ಳುವ ವೇಳೆ ಚಂದ್ರಗಿರಿ ಕೋಟೆಗೆ ಪ್ರವಾಸಿಗಳ ಸಂದರ್ಶನ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಜಲದಾರಿ ಮೂಲಕ ಕಾಸರಗೋಡು ನಗರದಿಂದ ಅಲ್ಲಿಗಿರುವ ದೂರ ಕಡಿಮೆಗೊಳ್ಳಲಿದೆ. ಈಗ ಅಸ್ತಿತ್ವದಲ್ಲಿರುವ ಜೈವಿಕ ವೈವಿಧ್ಯಗಳನ್ನು ಅದೇ ರೀತಿ ಸಂರಕ್ಷಿಸಿಕೊಂಡು, ಪರಿಸರ ಟೂರಿಸಂ ಸಾಧ್ಯತೆಯನ್ನು ಇಲ್ಲಿ ಉಪಯೋಗಿಸಲಾಗುವುದು.
ಬೇಕಲದ ಬಿಳಿಕ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ 380 ವರ್ಷಗಳ ಇತಿಹಾಸ ಹೊಂದಿರುವ ಚಂದ್ರಗಿರಿ ಕೋಟೆ, ಕೇರಳದ ದ್ವಿತೀಯ ಮುಸ್ಲಿ೦ ಮಸೀದಿಯಾದ ಮಾಲೀಕ್ ದೀನಾರ್ ಮಸೀದಿ ಇತ್ಯಾದಿಗಳು ಚಂದ್ರಗಿರಿ ಹೊಳೆಯ ಪಾರಂಪರಿಕ ಕೇಂದ್ರಗಳು, ಈ ತೀರದ ಸೌ೦ದರ್ಯ ಹಾಗೂ ಕಾಂಡ್ಲ ಕಾಡಿನ ಹಸಿರು, ಪ್ರವಾಸಿಗರನ್ನು ಇಲ್ಲಿಗೆ ಕೈ ಬೀಸಿ ಕರೆದು ಆಕಷಿ೯ಸುವಂತೆ ಮಾಡಲಿದೆ ಎಂದು ಮಾಹಿತಿ.
ಇದರ ಜೊತೆಗೆ ಸಮೀಪದ ರಸ್ತೆಗಳಲ್ಲಿ ಸ್ಥಳೀಯ ರುಚಿಕರ ಹಾಗೂ ವೈವಿಧ್ಯಮಯ ತಿಂಡಿ-ತಿನಸುಗಳ ಮಾರಾಟ ಸ್ವಾಲ್ಗಳ ಸೌಕರ್ಯಗಳನ್ನೂ ಏರ್ಪಡಿಸಲಾಗುವುದು. ತಳಂಗರೆ ಟೋಪಿ, ಕಾಸರಗೋಡು ಸೀರೆ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಪೆವಲಿನ್ಗಳ ಸಿದ್ಧತೆ ಗಳನ್ನೂ ಏರ್ಪಡಿಸಲಾಗುವುದು.
ರಾಜ್ಯ ಬಂದರು ಇಲಾಖೆಯ ಮಾಲಕತ್ವದಲ್ಲಿರುವ ಸ್ಥಳದಲ್ಲಿ ಬಂದರು ಇಲಾಖೆಯ ನಿಧಿ ಬಳಸಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಹೀಗೆ ಜಾರಿಗೊಳಿಸಲಾಗುವ ಯೋಜನೆಯ ಪೂರ್ಣ ರೂಪುರೇಷೆಯನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಅವಲೋಕನಾ ಸಭೆಯಲ್ಲಿ ಸಚಿವರ ಮುಂದೆ ಮ೦ಡಿಸಿದರು.
ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್, ಕಾಸರಗೋಡು ಸಗರ ಸಭಾ ಅಧ್ಯಕ್ಷ ನ್ಯಾ.ವಿ.ಎಂ.ಮುನೀರ್, ಉಪ ಜಿಲ್ಲಾಧಿಕಾರಿ (ಎಲ್ ಆರ್) ಕೆ. ರವಿ ಕುಮಾರ್, ಡಿ.ಟಿ.ಪಿ.ಸಿ ಕಾರ್ಯದರ್ಶಿ ಬಿಜು ರಾಘವನ್, ಬಿ.ಆರ್.ಡಿ.ಸಿ ಆಸಿಸೈಂಟ್ ಮ್ಯಾನೇಜರ್ ಪಿ.ಸುನಿಲ್ ಮೊದಲಾದವರು ಭಾಗಹಿಸಿದರು.