ವಿಟ್ಲ, ಜು.18 (DaijiworldNews/HR): ಹಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಹೊಳೆ ತೊರೆಗಳು ಉಕ್ಕಿ ಹರಿಯುತ್ತಿದ್ದು, ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.
ಪ್ರತಿ ವರ್ಷವು ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಸೇತುವೆ ಮುಳುಗಡೆಗೊಳ್ಳುತ್ತಿದ್ದು, ಈ ಬಾರಿ ಕೂಡ ಮುಳುಗಡೆಗೊಂಡಿದೆ. ಅಣೆಕಟ್ಟಿಗೆ ಕಸ, ಮರದ ಕೊಂಬೆ, ದಿಮ್ಮಿಗಳು ಸೇರಿಕೊಂಡಿದೆ. ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಸೇತುವೆ ಮೇಲಿನಿಂದ ನೀರು ಹಾದು ಹೋಗುತ್ತಿದೆ.
ಚೆಕ್ಕಿದಕಾಡಿನ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಇದಾಗಿದ್ದು ಪಕ್ಕದಲ್ಲೇ ಇದ್ದ ಕೃಷಿ ಭೂಮಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿದೆ. ಈ ಸೇತುವೆ ಮೂಲಕ ಸಂಚಾರಿಸುವ ಜನರು ಬೇರೆ ಮಾರ್ಗದ ಮೂಲಕ ಸಂಚಾರಿಸುವ ಪರಿಸ್ಥಿತಿ ಎದುರಾಗಿದೆ. ಈ ಸೇತುವೆಯನ್ನು ಐದಾರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಕಳೆದ ಬಾರಿಯ ನೀರಿನ ಪ್ರವಾಹದಿಂದ ಸೇತುವೆಯ ತಡೆ ಮುರಿದಿದೆ. ಇದರಿಂದ ಇನ್ನೂ ಕೂಡ ಆಂತಕ ಹೆಚ್ಚಾಗಿದೆ.