ಕಾಸರಗೋಡು, ಜು.17 (DaijiworldNews/HR): ಮಂಜೇಶ್ವರ ಮಾಜಿ ಶಾಸಕ ಎಂ.ಸಿ ಕಮರುದ್ದೀನ್ ವಿರುದ್ದದ ಫ್ಯಾಶನ್ ಗೋಲ್ಡ್ ಜುವೆಲ್ಲರಿ ಠೇವಣಿ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಠೇವಣಿದಾರರು ಕೆಲ ದಿನಗಳ ಹಿಂದೆ ಮುಖ್ಯ ಮಂತ್ರಿ ಹಾಗೂ ಡಿಜಿಪಿಯವರಿಗೆ ಮನವಿ ಸಲ್ಲಿಸಿದ್ದು, ತನಿಖೆಗೆ ಒತ್ತಾಯಿಸಿದ್ದರು.
ಕೆಲ ಸಮಯಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ತನಿಖೆಯನ್ನು ಮತ್ತೆ ಚುರುಕುಗೊಳಿಸಲು ಕ್ರೈಂ ಬ್ರಾಂಚ್ ಎಸ್ಪಿ ಕಾಸರಗೋಡು ಡಿವೈಎಸ್ಪಿ ಅವರಿಗೆ ಆದೇಶ ನೀಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂ.ಸಿ ಕಮರುದ್ದೀನ್ನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಪ್ರಕರಣ ಪ್ರಮುಖ ಆರೋಪಿ ಪಿ.ಕೆ ಪೂಕೋಯ ತಂಘಳ್ ಇನ್ನೂ ತಲೆ ಮರೆಸಿಕೊಂಡಿದ್ದು, ಇನ್ನೂ ಬಂಧಿಸಲಾಗಿಲ್ಲ. ಫ್ಯಾಶನ್ ಗೋಲ್ಡ್ ಚಿನ್ನಾಭರಣ ಮಳಿಗೆ ಹೆಸರಿನಲ್ಲಿ ಕೋಟ್ಯಾಂತರ ರೂ. ಪಡೆದು ವಂಚನೆ ಬಗ್ಗೆ ಕೇಸು ದಾಖಲಿಸಲಾಗಿತ್ತು. 175 ಕ್ಕೂ ಅಧಿಕ ಪ್ರಕರಣಗಳನ್ನು ಈಗಾಗಲೇ ದಾಖಲಿಸಲಾಗಿದೆ.