ಕಾರ್ಕಳ, ಜು.17 (DaijiworldNews/HR): ಕ್ಷತ್ರಿಯ ಮರಾಠ ಸಮಾಜದ ಆಡಳಿತಕ್ಕೆ ಒಳಪಟ್ಟ ಐತಿಹಾಸಿಕ ಹಿನ್ನಲೆ ಹೊಂದಿರುವ ಹಿರಿಯಂಗಡಿ ಶ್ರೀ ದುರ್ಗಪರಮೇಶ್ವರಿ ಶ್ರೀ ಕ್ಷೇತ್ರಕ್ಕೆ ಧಾರ್ಮಿಕ ದತ್ತಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ ದೇವಸ್ಥಾನವು ಅತ್ಯಂತ ಸುಂದರವಾಗಿ ಮೂಡಿಬಂದಿದೆ, ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸಾವನೆಯನ್ನು ಕ್ಷೇತ್ರದ ಆಡಳಿತ ಮಂಡಳಿ ಸಲ್ಲಿಸಿದ್ದು, ಆದಕ್ಕೆ ಸ್ಪಂದಿಸಿದ ಸಚಿವ ಸರಕಾರದಿಂದ ಅನುದಾಣ ಬಿಡುಗಡೆಯಾಗುವಂತೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಛತ್ರಪತಿ ಶಿವಾಜಿ ಮಹರಾಜರ ಭಾವಚಿತ್ರಕ್ಕೆ ಪುಪ್ಫ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದ ಸಚಿವರನ್ನು ಆಡಳಿತ ಮಂಡಲಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಿರೀಶ್ ರಾವ್ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಪ್ರಕಾಶ್ ಜಾದವ್, ಬ್ರಹ್ಮಕಲಶೋತ್ಸವ ಸಮಿತಿಯ ಅದ್ಯಕ್ಷರಾದ ಶುಭದರಾವ್, ಮೊಕ್ತೆಸರರುಗಳಾದ ಶೇಖರ್ ರಾವ್, ರಾಮಚಂದ್ರ ರಾವ್, ಗಣೇಶ್ ರಾವ್, ಸುದೀಂದ್ರರಾವ್ ಮತ್ತಿತರರು ಉಪಸ್ಥಿತಿತರಿದ್ದರು.