ಕಾರ್ಕಳ , ಜು 17 (DaijiworldNews/PY): ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 16ರಂದು ಶಾಸಕ ವಿ ಸುನಿಲ್ ಕುಮಾರ್ ಇವರ ಯೋಜನೆಯಾದ ವಾತ್ಸಲ್ಯ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.
ಕಾರ್ಕಳ ಪುರಸಭೆಯ ಅಧ್ಯಕ್ಎ ಸುಮಾ ಕೇಶವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸುನಿಲ್ ಕುಮಾರ್ ಅವರು, ವಾತ್ಸಲ್ಯ ಆರೋಗ್ಯ ತಪಾಸಣ ಶಿಬಿರದ ಮಹತ್ವ ಮತ್ತು ಮುಂಜಾಗ್ರತಾ ಆರೋಗ್ಯ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಶ್ರೀ ಮಣಿರಾಜ್ ಶೆಟ್ಟಿ,ವಾತ್ಸಲ್ಯ ಕಾರ್ಯಕ್ರಮದ ಸಂಯೋಜಕ ಸುಮಿತ್ ಶೆಟ್ಟಿ,ಶ್ರೀಮತಿ ರೇಷ್ಮಾ ಉದಯ್ ಶೆಟ್ಟಿ , ಶಾಲಾ ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಣೈ, ಶತಮಾನ ಸಮಿತಿಯ ಅಧ್ಯಕ್ಷ ನವೀನ್ ಶೆಟ್ಟಿ, ಪುರಸಭಾ ವಾರ್ಡ್ ಮೆಂಬರ್ಗಳಾದ ರೆಹಮತ್ ಮತ್ತು ಪ್ರಭಾ, ಶಿಕ್ಷಣಸಂಯೋಜಕ ಕೃಷ್ಣ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಾಸ್ಕರ್ ,ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ಧಪ್ಪ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಕೃಷ್ಣಾನಂದ ಶೆಟ್ಟಿ.ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕಿಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನುರಿತ ವೈದ್ಯರಿಂದ 15 ವರ್ಷದ ಕೆಳಗಿನ ವಯೋಮಿತಿಯ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಯಿತು.
ಕೆ ನರೇಂದ್ರ ಕಾಮತ್ ದೈಹಿಕ ಶಿಕ್ಷಣ ಶಿಕ್ಷಕರು ಕಾಬೆಟ್ಟು ಇವರು ಕಾರ್ಯಕ್ರಮ ನಿರೂಪಿಸಿದರು.