ಕಾರ್ಕಳ, ಜು.17 (DaijiworldNews/HR): ಮುಂಡ್ಲಿ ಕಾರ್ಕಳದ ಯುವ ಸ್ಪಂದನ ಗೆಳೆಯರ ಬಳಗ ಸಂಸ್ಥೆಯು 4ನೇ ವರ್ಷವನ್ನು ಪೂರ್ತಿಗೊಳಿಸಿದ ಹಿನ್ನಲೆಯಲ್ಲಿ ನಗರದ ಚೇತನಾ ವಿಶೇಷ ಶಾಲೆಗೆ ವಿದ್ಯಾರ್ಥಿಗಳ ಅವಶ್ಯಕ ಬೇಡಿಕೆಯಾದ ವೀಲ್ಚೇರನ್ನು ನೀಡಿದ್ದಾರೆ.
ಈ ವೇಳೆ ಯುವ ಸ್ಪಂದನ ಗೆಳೆಯರ ಬಳಗದ ಸದಸ್ಯರಾದ ಮನೋಜ್, ಅಜಿತ್, ಅಭಿನಂದನ್, ಶಾಲಾ ಸಲಹಾ ಸಮಿತಿ ಸದಸ್ಯ ವಿಜಯ್ ಕುಮಾರ್, ಮುಖ್ಯೋಪಾಧ್ಯಯಿನಿ ಹೇಮಲತಾ ಉಪಸ್ಥಿತರಿದ್ದರು.