ಕಾಸರಗೋಡು, ಜು.16 (DaijiworldNews/HR): ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಹಿಂಗೆದುಕೊಳ್ಳಲು ಬಿಎಸ್ಪಿ ಅಭ್ಯರ್ಥಿ ಕೆ. ಸುಂದರರಿಗೆ ಲಂಚ ನೀಡಿದ ಆರೋಪದ ಬಗ್ಗೆ ತನಿಖೆಯೂ ಜಿಲ್ಲಾ ಮಟ್ಟದ ಮುಖಂಡರತ್ತ ಸಾಗಿದ್ದು, ಶುಕ್ರವಾರ ಬಿಜೆಪಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಣಿಕಂಠ ರೈಯನ್ನು ಕ್ರೈಂ ಬ್ರಾಂಚ್ ವಿಚಾರಣೆ ನಡೆಸಿದೆ.
ಕಾಸರಗೋಡಿನ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಯಿತು.
ಕೆ.ಸುಂದರರಿಂದ ಈಗಾಗಲೇ ಮಾಹಿತಿಗಳನ್ನು ಕಲೆ ಹಾಕಿರುವ ತನಿಖಾ ತಂಡ ಇದೀಗ ಜಿಲ್ಲಾ ಮುಖಂಡರನ್ನು ವಿಚಾರಣೆಗೊಳಪಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ನಾಮಪತ್ರ ಹಿಂದೆಗೆದುಕೊಳ್ಳಲು ಬಿಜೆಪಿ ಮುಖಂಡರು ಎರಡೂವರೆ ಲಕ್ಷ ರೂ. ಹಣ, ಮೊಬೈಲ್ ಫೋನ್ ಹಾಗೂ ಇನ್ನಿತರ ಆಮಿಷಗಳನ್ನು ನೀಡಿದ್ದರು ಎಂದು ಸುಂದರ ಬಹಿರಂಗಪಡಿಸಿದ್ದರು.