ಕಾಸರಗೋಡು, ಜು.16 (DaijiworldNews/HR): ಐದು ವರ್ಷಗಳ ಹಿಂದೆ ಮನೆಯ ಬೀಗ ಮುರಿದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚೆರ್ವತ್ತೂರಿನ ಸಿದ್ದಿಕ್ (36) ಎಂದು ಗುರುತಿಸಲಾಗಿದೆ.
2016ರಲ್ಲಿ ಬಂದ್ಯೋಡು ಕುಕ್ಕಾರು ಶಾಲಾ ಬಳಿಯ ಇಬ್ರಾಹಿಂ ರವರ ಮನೆಯ ಬೀಗ ಮುರಿದು ಒಳನುಗ್ಗಿ 60 ಸಾವಿರ ರೂ . ನಗದು ಹಾಗೂ ಎರಡು ಪವನ್ ಚಿನ್ನಾಭರಣವನ್ನು ಕಳವು ಮಾಡಲಾಗಿದ್ದು, ಈತ ವಯನಾಡಿನ ಕಲ್ಪಟ್ಟದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕುಕ್ಕರಿನಲ್ಲಿ ಕಳವು ನಡೆಸಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ.
ಇನ್ನು ಕಣ್ಣೂರು, ಕೋಜಿಕ್ಕೋಡ್, ಕಲ್ಪಟ್ಟ ಮೊದಲಾದೆಡೆಗಳಲ್ಲಿ ಸೇರಿದಂತೆ ಹದಿನೈದಕ್ಕೂ ಅಧಿಕ ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.