ಕಾರ್ಕಳ, ಜು. 15 (DaijiworldNews/HR): 2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಕಾರ್ಕಳ ಅಗ್ನಿಶಾಮಕ ಠಾಣೆಯ ಸುರೇಶ್ ಕುಮಾರ್ ಭಾಜನರಾಗಿದ್ದಾರೆ.
ಬೆಂಗಳೂರಿನ ಬ್ಯಾಂಕ್ವೆಟ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಕ ಪ್ರದಾನಿಸಿ ಗೌರವಿಸಿದರು.
1997ರಂದು ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡ ಸುರೇಶ್ ಕುಮಾರ್, ಸುಮಾರು ಸುದೀರ್ಘ 24 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸರಸ್ವತಿಪುರಂ, ಸಾಗರ, ಬೇಳೂರು ಅಗ್ನಿಶಾಮಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಪ್ರಸುತ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕರ್ತ್ಯವ ನಿರ್ವಹಿಸುತ್ತಿದ್ದು, ಅವರು ಮೂಲತಃ ಮಂಗಳೂರಿನ ಕೆಪಿಟಿ ಪರಿಸರದ ನಿವಾಸಿಯಾಗಿದ್ದಾರೆ.