ಮಂಗಳೂರು, ಜು.15 (DaijiworldNews/HR): ಮಂಗಳೂರಿನಾದ್ಯಂತ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಈ ಹಿಂದೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಾಹನ ಕಳವು, ಮನೆಕಳ್ಳತನ, ಸರಕಳ್ಳತನ, ದೇವಸ್ಥಾನದಿಂದ ಕಳವು, ದನ ಕಳವು ಸೇರಿದಂತೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಇಂದು ಬೆಳ್ಳಗ್ಗಿನ ಜಾವ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಸದ್ಯ ತಮ್ಮ ಜೀವನೋಪಾಯಕ್ಕೆ ಯಾವ ವೃತ್ತಿ ಮಾಡುತ್ತಿದ್ದಾರೆ ಹಾಗೂ ಇತ್ಯಾದಿ ಮಾಹಿತಿಗಳನ್ನು ವಿಚಾರಿಸುವುದಕ್ಕಾಗಿ ಇಂದು ಬೆಳ್ಳಗೆ ನಸುಕಿನ ಜಾವ ಅವರನ್ನು ವಡಕ್ಕೆ ಪಡೆದು ವಿಚಾರಣೆ ನಡೆಸಿ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 252 ಎಂ.ಓ.ಬಿ ಆಸಾಮಿಗಳನ್ನು ವಶಕ್ಕೆ ಪಡೆದು ಅವರಿಂದ 179 ಮೊಬೈಲ್ ಫೋನ್, 67 ವಾಹನಗಳನ್ನು ವಶಕ್ಕೆ ಪಡೆದು 120 ಮಂದಿಯ ವಿರುದ್ಧ ಕಲಂ 110 ಸಿಆರ್ಪಿಸಿ, 97 ಮಂದಿಯ ವಿರುದ್ಧ ಕಲಂ 107 ಹಾಗೂ 35 ಮಂದಿಯ ವಿರುದ್ಧ 27 (ಬಿ) ಎನ್ಡಿಪಿಎಸ್ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.