ಉಡುಪಿ, ಜು.15 (DaijiworldNews/HR): ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಮಟಪಾಡಿ ಗ್ರಾಮದ ಚಿತ್ತಾರಿ ನಂದಿಕೇಶ್ವರ ದೇವಸ್ಥಾನದ ಮತ್ತು ಮನೆಯೊಂದರ ಮೇಳೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ದೇವಸ್ಥಾನದ ಮೇಲೆ 150 ವರ್ಷದ ಹಳೆಯ ಮರ ಉರುಳಿ ಬಿದ್ದಿದ್ದು, ಅಲ್ಲಿಯೇ ಸಮೀಪದ ಮಹಾಬಲ ನಾಯರಿಯವರ ಮನೆಯ ಮೇಲೆ ಮರ ಬಿದ್ದು, ಮನೆಯ ಛಾವಣಿ ಮತ್ತು ಬಚಲು ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮುದ್ದುಜತ್ತನ್ ಅವರ ಹಲಸಿನ ಮರ ಗಾಳಿಮಳೆಗೆ ಬಿದ್ದಿದೆ ಘಟನೆಯಿಂದ ಅಂದಾಜು ರೂ 6 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಅಧಿಕಾರಿಗಳು ಗ್ರಾ.ಪಂ ಅಧ್ಯಕ್ಷರು ಮತ್ತು ಪಂಚಾಯತ ಸದಸ್ಯರು ಭೇಟಿ ನೀಡಿದ್ದಾರೆ.