ಕಾರ್ಕಳ , ಜು 15 (DaijiworldNews/MS): ತಾಯಿ ನಿಧನದಿಂದ ಮನ ನೊಂದು ಮಗನೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಈದು ನೂರಾಲ್ಬೆಟ್ಟು ಎಂಬಲ್ಲಿ ನಡೆದಿದೆ. ನೂರಾಲ್ ಬೆಟ್ಟು ಗ್ರಾಮದ ಪೂಂಜಾಜೆ ಯ ದರ್ಖಾಸು ಮನೆಯ ಸುರೇಶ್ ಪೂಜಾರಿ (24) ಬದುಕಿಗೆ ಅಂತ್ಯ ಹೇಳಿದವರು.
ಕಳೆದ ಒಂದು ವರ್ಷದ ಹಿಂದೆ ಈತನ ತಾಯಿ ನಿಧನರಾಗಿದ್ದರು. ಆ ನಂತರದ ದಿನಗಳಲ್ಲಿ ಮಾನಸಿಕವಾಗಿ ನೊಂದುಕೊಂಡಿದ್ದ ಸುರೇಶ್ ಪೂಜಾರಿ ಮನೆ ಎದುರಿನ ಪೇರಳೆ ಮರಕ್ಕೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಗೈದಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821